Advertisement

ಕ್ಯಾಸಲ್ ರಾಕ್ ಮಣ್ಣು ತೆರವು ; ಶೀಘ್ರದಲ್ಲೇ ರೈಲು ಸಂಚಾರ ಪುನರಾರಂಭ

05:58 PM Jul 30, 2023 | Team Udayavani |

ಪಣಜಿ: ಕೆಲವು ದಿನಗಳ ಹಿಂದೆ ಕ್ಯಾಸಲ್ ರಾಕ್-ಕಾರಂಜೋಲ್ ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಕಾರಣ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿತ್ತು,ಕೆಲ ರೈಲುಗಳನ್ನು ಗೊತ್ತುಪಡಿಸಿದ ನಿಲ್ದಾಣದ ಮೊದಲ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಸತತ ಸುಮಾರು ಎಂಟು ದಿನಗಳ ಮಣ್ಣು ತೆರವು ಕಾರ್ಯಾಚರಣೆಯ ನಂತರ ರೈಲ್ವೆ ಹಳಿಯನ್ನು ಸುಗಮಗೊಳಿಸಲಾಗಿದೆ.

Advertisement

ರೈಲು ಹಳಿಗಳ ಮೇಲಿನ ಮಣ್ಣು, ಕಲ್ಲು ಮತ್ತು ಮರಗಳನ್ನು ತೆಗೆದುಹಾಕುವ  ಕಾರ್ಯ ಪೂರ್ಣಗೊಂಡಿದ್ದು, ಹಳಿಗಳನ್ನು ಸುಗಮಗೊಳಿಸುವಲ್ಲಿ ಸಿಬಂದಿಗಳು ಯಶಸ್ವಿಯಾಗಿದ್ದಾರೆ. ರೈಲು ಮಾರ್ಗದ ಪರೀಕ್ಷೆಯೂ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತ ಸಂಭವಿಸಿದಾಗ, ಜುಲೈ 25 ರಂದು ಹೊರಡಬೇಕಿದ್ದ ವಾಸ್ಕೋ-ಡ-ಗಾಮಾ ಯಶವಂತಪುರ ರೈಲು ಸಂಖ್ಯೆ 17310 ಅನ್ನು ಸಹ ರದ್ದುಗೊಳಿಸಲಾಗಿತ್ತು. ಇದೀಗ ಹಳಿಗಳ ಮೇಲೆ ಬಿದ್ದಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಎಂದು  ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಶೀಘ್ರದಲ್ಲೇ ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next