Advertisement

Caste census; ವರದಿ ಬಹಿರಂಗಕ್ಕೆ ಮುನ್ನವೇ ಅವೈಜ್ಞಾನಿಕ ಎನ್ನಬೇಡಿ:ಬಿ.ಕೆ. ಹರಿಪ್ರಸಾದ್‌

12:51 AM Oct 08, 2024 | Team Udayavani |

ಬೆಂಗಳೂರು: ನಾಡಿನ ಎಲ್ಲ ವರ್ಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಅರಿಯಲು 165 ಕೋಟಿ ರೂ. ಖರ್ಚು ಮಾಡಿ ರಾಜ್ಯ ಸರಕಾರ ಸಮೀಕ್ಷೆ ಮಾಡಿಸಿದೆ. ಅದರ ವರದಿಯನ್ನು ಸಂಪುಟದ ಮುಂದಿಡುವುದಾಗಿ ಹೇಳಿದೆ. ಅದಕ್ಕೂ ಮೊದಲೇ ಇದನ್ನು ಅವೈಜ್ಞಾನಿಕ ಎನ್ನುವುದು ತಪ್ಪು ಎಂದು ಮೇಲ್ಮನೆಯ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು 7 ಕೋಟಿ ಕನ್ನಡಿಗರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಇದರಲ್ಲಿ ಲಿಂಗಾಯತರು, ಒಕ್ಕಲಿ ಗರನ್ನೂ ಒಳಗೊಂಡು ಸಮೀಕ್ಷೆ ಮಾಡಲಾಗಿದೆ ಎಂದರು.

ತಿದ್ದುಪಡಿಗೆ ಅವಕಾಶ ಇದೆ
ಸಂಪುಟ ಸಭೆಯಲ್ಲಿ ಮಂಡನೆಯಾದ ಅನಂತರ ಅಧಿವೇಶನದಲ್ಲಿ ಚರ್ಚಿಸಲೂ ಅವಕಾಶ ಇರುತ್ತದೆ. ತಿದ್ದುಪಡಿಯನ್ನೂ ಮಾಡಿಕೊಳ್ಳಬಹುದಾಗಿರುತ್ತದೆ. ಈ ಹಿಂದೆ ಮಂಡಲ್‌ ಆಯೋಗದ ವರದಿ ಪ್ರಕಾರ ಶೇ. 52ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿತ್ತು. ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ನಡೆಯಿತು. ಸಂಸತ್ತಿನಲ್ಲೂ ಚರ್ಚೆ ಯಾಗಿ ಕೊನೆಗೆ ಶೇ. 27ರಷ್ಟು ಮೀಸಲಾತಿ ನಿಗದಿಯಾಯಿತು. ಪ್ರಜಾಪ್ರಭುತ್ವ ಪ್ರಬುದ್ಧ ವಾಗಿದೆ ಎಂದು ಹೇಳಲು ಚರ್ಚೆಯ ಅನಂತರ ಬರುವ ತೀರ್ಮಾನಗಳೇ ಮಾನದಂಡವಾಗುತ್ತವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next