Advertisement

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

12:47 AM May 07, 2024 | Team Udayavani |

ಕುಂದಾಪುರ: ವಡೇರಹೋಬಳಿ ಗ್ರಾಮದ ಶ್ರೀ ಯಕ್ಷೇಶ್ವರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ, ಕಾಣಿಕೆ ಹುಂಡಿಯಲ್ಲಿದ್ದ 15 ಸಾವಿರ ರೂ. ನಗದು ಸಹಿತ ಒಟ್ಟಾರೆ 30 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮೇ 2ರ ಬೆಳಗ್ಗೆ 10ರಿಂದ ಮೇ 2ರ ಅಪರಾಹ್ನ 3 ಗಂಟೆಯ ಅವಧಿಯಲ್ಲಿ ಸಂಭವಿಸಿದೆ.

Advertisement

ಬೆಳಗ್ಗೆ 10ಕ್ಕೆ ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ, ಚಿಲಕ ಹಾಕಿ ತೆರಳಿರುತ್ತಾರೆ. ಅದೇ ದಿನ ಅಪರಾಹ್ನ 3 ಗಂಟೆ ಸುಮಾರಿಗೆ ದೇವಸ್ಥಾನದ ಕಾರ್ಯದರ್ಶಿ ಸಂತೋಷ್‌ ಬಂದು ನೋಡಿದಾಗ ಕಾಣಿಕೆ ಹುಂಡಿ ಕಳವಾಗಿರುವುದು ತಿಳಿದುಬಂದಿದೆ.

ಕೂಡಲೇ ಅವರು ದೇವಸ್ಥಾನದ ಇತರರಿಗೆ ತಿಳಿಸಿದ್ದು, ಆ ಬಳಿಕ ನೋಡಿದಾಗ 2 ಕೆ.ಜಿ. ತೂಕದ ಅಂದಾಜು 5 ಸಾ.ರೂ. ಮೌಲ್ಯದ ತಾಮ್ರದ ಕೊಡಪಾನ, 6 ಕೆ.ಜಿ. ತೂಕದ ಅಂದಾಜು 10 ಸಾ. ರೂ. ಮೌಲ್ಯದ ಹಿತ್ತಾಳೆ ದೀಪ, 15 ಸಾ.ರೂ. ನಗದು ಸಹಿತ 30 ಸಾವಿರ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವುದು ತಿಳಿದುಬಂತು.

ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಜುನಾಥ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next