Advertisement

Kasaragod: ಕಳವು ಪ್ರಕರಣ; ಆರೋಪಿಯ ಬಂಧನ

05:49 PM Oct 28, 2024 | Team Udayavani |

ಕಾಸರಗೋಡು: ಬೇಳ ರತ್ನಗಿರಿಯ ಶ್ರೀ ಕುದ್ರೆಕ್ಕಾಳಿ ಅಮ್ಮ ಕ್ಷೇತ್ರದಿಂದ ಗಂಟೆಗಳನ್ನು ಕಳವು ಮಾಡಿದ ಆರೋಪಿ ಮೆಣಸಿನಪಾರೆ ನಿವಾಸಿ ಸತೀಶ್‌ ಯಾನೆ ದೀಪಕ್‌(40)ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

Advertisement

ಕ್ಷೇತ್ರದಿಂದ ಕಳವು ಮಾಡಿದ ಎಂಟು ಗಂಟೆಗಳನ್ನು ಬದಿಯಡ್ಕದ ಗುಜರಿ ಅಂಗಡಿಗೆ ಮಾರಾಟ ಮಾಡಲು ಯತ್ನಿಸಿದ್ದನು. ಗಂಟೆಗಳನ್ನು ನೋಡಿ ಸಂಶಯಗೊಂಡ ಅಂಗಡಿ ಮಾಲಕ ಈ ವಿಷಯವನ್ನು ಕೂಡಲೇ ಪೊಲೀಸರಿಗೆ ತಿಳಿಸಿದ್ದರು. ತತ್‌ಕ್ಷಣ ಅಂಗಡಿಗೆ ಬಂದ ಪೊಲೀಸರು ಆತನನ್ನು ಬಂಧಿಸಿದರು.

ಈ ಗಂಟೆಗಳಿಗೆ ಒಟ್ಟು 16 ಸಾವಿರ ರೂ. ಮೌಲ್ಯ ಅಂದಾಜಿಸಲಾಗಿದೆ. ಗಂಟೆ ಕಳವಿನ ಬಗ್ಗೆ ಕ್ಷೇತ್ರದ ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಉದಯಕೃಷ್ಣ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಮನೆಯೊಂದರ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವು, ಗೋದಾಮಿನಿಂದ ಮಕ್ಕಳ ಪೌಷ್ಠಿಕ ಆಹಾರ ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next