Advertisement

ರಾಮ ಚರಿತ ಮಾನಸ ಸುಟ್ಟವರ ವಿರುದ್ಧ ಎನ್‌ಎಸ್‌ಎ ಅಡಿ ಕೇಸು

10:36 PM Feb 06, 2023 | Team Udayavani |

ಲಕ್ನೋ: “ರಾಮಚರಿತಮಾನಸ’ ಗ್ರಂಥದ ಪ್ರತಿಗಳನ್ನು ಸುಟ್ಟುಹಾಕಿರುವ ಆರೋಪದಡಿ ಉತ್ತರ ಪ್ರದೇಶದ ಜೈಲಿನಲ್ಲಿರುವ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಾಗಿದೆ.

Advertisement

ಅಖೀಲ ಭಾರತೀಯ ಒಬಿಸಿ ಮಹಾಸಭಾ ವತಿಯಿಂದ ಜ.29ರಂದು ಲಕ್ನೋದಲ್ಲಿ ನಡೆದ ಪ್ರತಿಭಟನೆಯಲ್ಲಿ “ರಾಮಚರಿತಮಾನಸ’ದ ಪ್ರತಿಗಳನ್ನು ಸುಟ್ಟುಹಾಕಲಾಗಿತ್ತು. ಈ ಸಂಬಂಧ ಲಕ್ನೋದ ಪಿಜಿಐ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಗಳಾದ ಮೊಹಮದ್‌ ಸಲೀಂ ಮತ್ತು ಸತ್ಯೇಂದ್ರ ಖಶ್ವಾ ಜೈಲಿನಲ್ಲಿದ್ದಾರೆ.

ಪ್ರಕರಣ ಸಂಬಂಧ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ, ದೇವೇಂದ್ರ ಪ್ರತಾಪ್‌ ಯಾದವ್‌, ಯಶ್‌ಪಾಲ್‌ ಸಿಂಗ್‌ ಲೋಧಿ, ಸತ್ಯೇಂದ್ರ ಖಶ್ವಾ, ಮಹೇಂದ್ರ ಪ್ರತಾಪ್‌ ಯಾದವ್‌, ಸುಜಿತ್‌ ಯಾದವ್‌, ನರೇಶ್‌ ಸಿಂಗ್‌, ಎಸ್‌.ಎಸ್‌.ಯಾದವ್‌, ಸಂತೋಷ್‌ ವರ್ಮಾ ಮತ್ತು ಮೊಹಮದ್‌ ಸಲೀಂ ಹಾಗೂ ಇತರರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next