Advertisement

ಹೋಂ ಕ್ವಾರಂಟೈನ್ ಉಲ್ಲಂಘಿಸಿದ ಅಧಿಕಾರಿಯ ಕುಟುಂಬದ ವಿರುದ್ಧ ಪ್ರಕರಣ

02:05 PM Apr 03, 2020 | keerthan |

ರಾಯಚೂರು: ಹೋಂ ಕ್ವಾರೆಂಟೇನ್ ಉಲ್ಲಂಘಿಸಿದ  ವೈಟಿಪಿಎಸ್ ನ ಅಧಿಕಾರಿಯ ಕುಟುಂಬದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಅಧಿಕಾರಿಯ ಮಗನ ಸ್ನೇಹಿತೆ ಜರ್ಮನಿಯಿಂದ ಶಕ್ತಿನಗರಕ್ಕೆ ಬಂದಿದ್ದರು. ಅಧಿಕಾರಿ ಪತ್ನಿ ಕೂಡ ವೈಟಿಪಿಎಸ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಗ ಸೇರಿದಂತೆ ಕುಟುಂಬದ ನಾಲ್ವರನ್ನು ಮಾರ್ಚ್ 14 ರಿಂದ ಮಾರ್ಚ 29 ರವರೆಗೆ ಹೋಂ ಕ್ವಾರೆಂಟೇನ್ ‌ನಲ್ಲಿ ಇಡಲಾಗಿತ್ತು. ಆದರೂ ಆದೇಶ ಉಲ್ಲಂಘಿಸಿ ಆರ್ ಟಿ ಪಿಎಸ್ , ವೈಟಿಪಿಎಸ್ ನಲ್ಲಿ ದಂಪತಿ ಕೆಲಸ ಮಾಡಿದ್ದರು.

ದೇವಸುಗೂರು  ಉಪತಹಸೀಲ್ದಾರ್ ದೂರಿನ ಮೇರೆಗೆ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next