Advertisement

Udhayanidhi Stalin ಹೇಳಿಕೆ ವಿರುದ್ಧ ದಾವೆ: ಪ್ರಮೋದ್‌ ಮುತಾಲಿಕ್‌

01:23 AM Sep 05, 2023 | Team Udayavani |

ಮಂಗಳೂರು: “ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ರೀತಿಯೇ ನಿರ್ಮೂಲ ಮಾಡಬೇಕು’ ಎಂದು ಹೇಳಿಕೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪುತ್ರ, ಸಚಿವ ಉದಯ ನಿಧಿ ಸ್ಟಾಲಿನ್‌ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

Advertisement

ಸೋಮವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದಯ ನಿಧಿಯ ಹೇಳಿಕೆ ಅಸಭ್ಯ, ಅಸಹ್ಯವಾದುದು. ಇದು ಖಂಡನೀಯ.

ಉದಯ ನಿಧಿ ತನ್ನ ಹೇಳಿಕೆಯನ್ನು ವಾಪಸ್‌ ಪಡೆದು ಕ್ಷಮೆ ಯಾಚಿಸಬೇಕು. ಹೇಳಿಕೆಯ ವಿರುದ್ಧ ಶ್ರೀರಾಮ ಸೇನೆ ತಮಿಳುನಾಡಿನಲ್ಲಿಯೂ ಪ್ರತಿಭಟನೆ ನಡೆಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next