Advertisement

Gangolli; ಆ್ಯಂಬುಲೆನ್ಸ್‌ಗೆ ದಾರಿ ಕೊಡದ ಬಸ್‌ ಚಾಲಕನ ವಿರುದ್ಧ ಪ್ರಕರಣ

11:11 PM Aug 05, 2024 | Team Udayavani |

ಗಂಗೊಳ್ಳಿ: ತ್ರಾಸಿ ಜಂಕ್ಷನ್‌ ಬಳಿ ರವಿವಾರ ರಾತ್ರಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುವ ಖಾಸಗಿ ಬಸ್ಸೊಂದು ಆ್ಯಂಬುಲೆನ್ಸ್‌ಗೆ ದಾರಿ ನೀಡಿಲ್ಲ ಎಂದು ಪ್ರಕರಣ ದಾಖಲಾಗಿದೆ.

Advertisement

ಬಸ್ಸನ್ನು ಚಾಲಕ ತ್ರಾಸಿ ಬಸ್‌ ಸ್ಟ್ಯಾಂಡ್‌ ಬಳಿ ಹೆದ್ದಾರಿಯ ಮಧ್ಯೆ ನಿಲ್ಲಿಸಿದ್ದು, ಅದೇ ಸಮಯ ಕುಂದಾಪುರ ಕಡೆಯಿಂದ ತುರ್ತು ಸೇವೆಯ ಆ್ಯಂಬುಲೆನ್ಸ್‌ ಬಂದಿದೆ. ಆದರೆ ಬಸ್‌ ಚಾಲಕ ಆ್ಯಂಬುಲೆನ್ಸ್‌ಗೆ ದಾರಿ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next