Advertisement

ಕಟ್ಟಡ ಮಾಲಕರು, ಗುತ್ತಿಗೆದಾರ, ಎಂಜಿನಿಯರ್‌ ವಿರುದ್ಧ  ಕೇಸ್‌

10:14 AM Apr 26, 2018 | |

ಪುತ್ತೂರು: ಬರೆಯ ಮಣ್ಣು ಬಿದ್ದು ಎರಡು ಜೀವಗಳು ಬಲಿಯಾದ ಪ್ರಕರಣದಲ್ಲಿ ಕಟ್ಟಡದ ಇಬ್ಬರು ಮಾಲಕರು, ಗುತ್ತಿಗೆದಾರರು ಹಾಗೂ ಎಂಜಿನಿಯರ್‌ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ ಎಂದು ಉಲ್ಲೇಖಿಸಲಾಗಿದೆ.

Advertisement

ಮಂಗಳವಾರ ಬೆಳಗ್ಗೆ 10.26ಕ್ಕೆದು ರ್ಘ‌ಟನೆ ಸಂಭವಿಸಿತ್ತು. ಕಟ್ಟಡ ಎಬ್ಬಿಸಲೆಂದು ನೆಲದಿಂದ 30 ಅಡಿಯಷ್ಟು ಆಳ ಗುಂಡಿಗಳನ್ನು ತೋಡಿದ್ದು, ಇದರ ತಳಭಾಗದಲ್ಲಿ ಒಟ್ಟು ಆರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭ ಬರೆ ಕುಸಿದು ಬಿದ್ದು, ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಮಂಗಳೂರಿನ ಜಲ್ಲಿಗುಡ್ಡೆ ನಿವಾಸಿ ಪದ್ಮನಾಭ (35) ಹಾಗೂ ಕೊಪ್ಪಳದ ಅಡವಿಬಾವಿ ನಿವಾಸಿ ಶಿವು ಯಾನೆ ಶಿವಣ್ಣ (40) ಮೃತಪಟ್ಟವರು. ಕೊಪ್ಪಳ ಜಿಲ್ಲೆ ಕುಷ್ಟಗಿಯ ಮಹಾಂತೇಶ್‌ ತಲೆಗೆ ಗಂಭೀರ ಗಾಯವಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೋಕಟ್ಟೆಯ ಯಶವಂತ್‌ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಕೊಪ್ಪಳದ ಕುಷ್ಟಗಿ ನಿವಾಸಿಗಳಾದ ನಾಗರಾಜ್‌ ಹಾಗೂ ಮೃತಪಟ್ಟ ಶಿವಣ್ಣ ಪತ್ನಿ ಹನುಮವ್ವ ಹಸುಗೂಸಿನೊಂದಿಗೆ ಘಟನಾ ಸ್ಥಳದಿಂದ ಸ್ವಲ್ಪ ದೂರ ಇದ್ದುದರಿಂದ ಅಪಾಯವಿಲ್ಲದೆ ಪಾರಾಗಿದ್ದಾರೆ.

ಮೃತ ಶಿವಣ್ಣನ ಪತ್ನಿ ಹನುಮವ್ವ ಹಾಗೂ ಪುತ್ತೂರು ನಗರಸಭೆಯಿಂದ ನಗರ ಠಾಣೆಗೆ ದೂರು ನೀಡಲಾಗಿದೆ. ಪರವಾನಿಗೆ ನವೀಕರಣಕ್ಕೆ ಅರ್ಜಿ ನೀಡಿದ್ದು, ಅನುಮತಿ ಪತ್ರ ಸಿಗುವ ಮೊದಲೇ ಕಾಮಗಾರಿ ಆರಂಭಿಸಲಾಗಿದೆ. ಆದ್ದರಿಂದ ಇದು ಅನಧಿಕೃತ ಕಟ್ಟಡ ಎಂಬ ತೀರ್ಮಾನಕ್ಕೆ ನಗರಸಭೆ ಬಂದಿದೆ. ಇದೇ ಆಧಾರದಲ್ಲಿ ಠಾಣೆಗೆ ದೂರು ನೀಡಿದೆ. ಇನ್ನೊಂದೆಡೆ ಕಾರ್ಮಿಕರ ಸುರ ಕ್ಷ ತೆಗೂ ಕ್ರಮ ಕೈಗೊಳ್ಳದೇ ಇರುವುದು ದುರಂತಕ್ಕೆ ಕಾರಣ ಎಂಬ ದೂರು ದಾಖಲಾಗಿದೆ. ಕಟ್ಟಡ ಮಾಲಕರಾದ ಅಜಿತ್‌ ನಾಯಕ್‌ ಹಾಗೂ ಪ್ರಕಾಶ್‌ ನಾಯಕ್‌, ಗುತ್ತಿಗೆದಾರ ಜಾನ್ಸನ್‌ ಹಾಗೂ ಎಂಜಿನಿಯರ್‌ ಸಚಿತಾನಂದ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸುರಕ್ಷತಾ ಪರಿಕರಗಳಿಲ್ಲ
ಕಟ್ಟಡದ ಕಾಮಗಾರಿ ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್‌, ಶೂ ಮೊದಲಾದ ಪರಿಕರಗಳನ್ನು ನೀಡಬೇಕು ಎಂಬ ನಿಯಮವಿದೆ. ಆದರೆ ಇದಾವುದನ್ನೂ ಕಾಮಗಾರಿ ವೇಳೆ ಕಾರ್ಮಿಕರಿಗೆ ಪೂರೈಕೆ ಮಾಡಿಲ್ಲ. ಇದನ್ನು ಬಳಸದೇ ಇರುವುದರಿಂದ ಪ್ರಕರಣ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಗಂಭೀರ ಗಾಯಗೊಂಡಿರುವ ಮಹಾಂತೇಶ್‌ ಅವರ ತಲೆಗೇ ಬಲವಾದ ಪೆಟ್ಟು ಬಿದ್ದಿದೆ.

Advertisement

ಅವೈಜ್ಞಾನಿಕ ಕಾಮಗಾರಿ
ಬರೆಯನ್ನು 30 ಅಡಿ ಆಳಕ್ಕೆ ಕೊರೆದು ಆವರಣ ಗೋಡೆ ನಿರ್ಮಾಣಕ್ಕೆ ತಯಾರಿ ನಡೆಸಲಾಗಿತ್ತು. ಆವರಣ ಗೋಡೆ ಎಬ್ಬಿಸಲೆಂದು ಬರೆಯನ್ನು ಟೊಳ್ಳಾಗಿ ಕೊರೆದಿರುವುದು ದುರಂತಕ್ಕೆ ಪ್ರಮುಖ ಕಾರಣ. ತಳದಲ್ಲಿ ಬರೆಯನ್ನು ಟೊಳ್ಳಾಗಿ ಕೊರೆದರೆ, ಮೇಲ್ಭಾಗದ ಮಣ್ಣು ಕುಸಿದು ಬೀಳುವುದು ಸಹಜ. ಹೀಗಾಗಿ, ಕಾಮಗಾರಿ ನಿರ್ವಹ ಣೆಯೂ ಅವೈಜ್ಞಾನಿಕವಾಗಿದೆ.

ಅಕ್ರಮ ಕಟ್ಟಡ!
ವರ್ಷಗಳ ಹಿಂದೆ ಕಟ್ಟಡ ಕಾಮಗಾರಿಗಾಗಿ ಪರವಾನಿಗೆ ಪಡೆದುಕೊಳ್ಳಲಾಗಿತ್ತು. ಇದರ ಅವಧಿ 2018ರ ಎಪ್ರಿಲ್‌ 14ಕ್ಕೆ ಕೊನೆಗೊಂಡಿತ್ತು. ಎ. 17ರಂದು ಪರವಾನಿಗೆ ನವೀಕರಣಕ್ಕೆ ಅರ್ಜಿ ನೀಡಿದ್ದು, ಇನ್ನೂ ಪರವಾನಿಗೆ ನೀಡಿರಲಿಲ್ಲ. ಅವಧಿ ಮೀರುವ ದಿನಾಂಕದ ಒಂದು ತಿಂಗಳು ಮೊದಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವಿದೆ. ಆದ್ದರಿಂದ ಇದನ್ನು ಅನಧಿಕೃತ ಕಟ್ಟಡ ನಿರ್ಮಾಣ ಎಂದು ಪರಿಗಣಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next