Advertisement

ಲಾರಿಗೆ ಕಾರು ಢಿಕ್ಕಿಯಾಗಿ ಅಬಕಾರಿ ಇಲಾಖೆಯ ನಿವೃತ್ತ ಡಿವೈಎಸ್ ಪಿ, ಪತ್ನಿ ಸ್ಥಳದಲ್ಲೇ ಸಾವು

04:55 PM Jul 18, 2022 | Team Udayavani |

ಭರಮಸಾಗರ (ಚಿತ್ರದುರ್ಗ) : ರಾಷ್ಟ್ರೀಯ ಹೆದ್ದಾರಿ 4 ರ ಕಸವನಹಳ್ಳಿ  ಬಳಿ ನಿಂತಿದ್ದ ಲಾರಿಗೆ ಕಾರು  ಢಿಕ್ಕಿ ಹೊಡೆದ ರಭಸಕ್ಕೆ ಅಬಕಾರಿ ಇಲಾಖೆಯ ನಿವೃತ್ತ ಡಿವೈಎಸ್ ಪಿ ಮತ್ತು ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ಚಿಕ್ಕಜೋಗಿ ಹಳ್ಳಿ ಮೂಲದ ಅಬಕಾರಿ ಇಲಾಖೆ ನಿವೃತ್ತ ಡಿವೈಎಸ್ ಪಿ ಜಯರಾಂ ನಾಯ್ಕ್ (73) ಅವರ ಪತ್ನಿ ಲತಾ (63) ಮೃತರು.

ಇದನ್ನೂ ಓದಿ: ಸಹಜ ಪ್ರವಾಸ: ಚೆನ್ನೈಗೆ ತೆರಳಿದ್ದ ಕಾಂಗ್ರೆಸ್ ಶಾಸಕರು ಗೋವಾಕ್ಕೆ ವಾಪಸ್!

ಬೆಂಗಳೂರಿನಿಂದ ದಾವಣಗೆರೆಗೆ ಸಂಚರಿಸುವ ಮಾರ್ಗ ಮಧ್ಯೆ ಕಸವನಹಳ್ಳಿ  ಬಳಿ ಚಲಿಸುತ್ತಿದ್ದ ಲಾರಿಗೆ ಮಾರುತಿ ಸ್ವಿಪ್ಟ್ ಕಾರು ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next