Advertisement

ಭದ್ರಾ ನಾಲೆಗೆ ಬಿದ್ದ ಬೊಲೆರೋ ಕಾರು: ಪತಿ ಪಾರು, ಪತ್ನಿ ನೀರುಪಾಲು

04:11 PM Aug 24, 2020 | keerthan |

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಕಾರೊಂದು ಭದ್ರಾ ನಾಲೆಗೆ ಬಿದ್ದ ಘಟನೆ ಸೋಮವಾರ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ನಡೆದಿದೆ. ಕಾರಿನಲ್ಲಿ ಪತಿ- ಪತ್ನಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಪತಿ ಪಾರಾಗಿದ್ದು, ಪತ್ನಿ ನೀರು ಪಾಲಾಗಿದ್ದಾರೆ.

Advertisement

ಕಾರಿನಲ್ಲಿದ್ದ ಸಂತೋಷ್ ಜೈನ್ ಪಾರಾಗಿದ್ದು, ಪತ್ನಿ ಸರ್ವಮಂಗಳ (32) ನೀರುಪಾಲಾಗಿದ್ದಾರೆ. ಇವರಿಗಾಗಿ ಶೋಧ ಕಾರ್ಯಾಚರನೆ ಆರಂಭವಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಬಿದ್ದು ಅವಘಡ‌ವಾಗಿರೋ ಸಾಧ್ಯತೆಯಿದೆ ಎನ್ನಲಾಗಿದೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next