Advertisement

ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ: ತಪ್ಪಿದ ಅನಾಹುತ

11:14 PM May 21, 2020 | Sriram |

ಮಂಗಳೂರು: ನಗರದ ಎಂಜಿ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ದೀಪಾ ಕಂಫರ್ಟ್ಸ್ ಮುಂಭಾಗದಲ್ಲಿ ಪಿವಿಎಸ್‌ ಕಡೆಯಿಂದ ಲಾಲ್‌ಬಾಗ್‌ ಕಡೆಗೆ ತೆರಳುತ್ತಿರುವ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಅನಾಹುತವೊಂದು ತಪ್ಪಿದೆ.

Advertisement

ವಾಹನ ಢಿಕ್ಕಿಯಾದ ರಭಸಕ್ಕೆ ವಿದ್ಯುತ್‌ ಕಂಬ ರಸ್ತೆಗೆ ವಾಲಿದ್ದು, ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ತತ್‌ಕ್ಷಣ ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್‌ ಕಡಿತಗೊಳಿಸಲು ಸೂಚಿಸಿದ್ದಾರೆ. ಅನಂತರ ಲೈನ್‌ಮ್ಯಾನ್‌, ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ಒಂದು ವೇಳೆ ವಿದ್ಯುತ್‌ ಕಂಬ ಅಥವಾ ವಿದ್ಯುತ್‌ ಹರಿಯುತ್ತಿದ್ದ ತಂತಿಯು ರಸ್ತೆಗೆ ಬೀಳುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ವಿದ್ಯುತ್‌ ತಂತಿಯನ್ನು ಹೊಂದಿಕೊಂಡು ಸುತ್ತಮುತ್ತ ಸುಮಾರು ಐದಾರು ವಿದ್ಯುತ್‌ ಕಂಬಗಳಿದ್ದು, ಅವುಗಳಿಗೂ ಅಪಾಯ ಎದುರಾಗುತ್ತಿತ್ತು. ಅದೃಷ್ಟವಶಾತ್‌ ಯಾವುದೇ ರೀತಿಯ ಅನಾಹುತ ಸಂಭವಿಸಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next