Advertisement

ಕಾರು ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

11:40 AM Nov 13, 2017 | Team Udayavani |

ಶಹಾಬಾದ: ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ
ನಗರದ ಜೆಇ ಕಾಲೋನಿ ಬಳಿ ರವಿವಾರ ನಡೆದಿದೆ.

Advertisement

ನಗರದ ಮಡ್ಡಿ ನಂ.1ರ ಯುವಕರಾದ ಹಣಮಂತ ಭೀಮರಾಯ ಹಾಗೂ ವಾಸು ಸುಬ್ರಮಣ್ಯಂ ಎಂಬುವವರು ಗಾಯಗೊಂಡಿದ್ದಾರೆ. ನಗರದ ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಇ ಕಾಲೋನಿ ಒಳಗಡೆ ಟಿವಿಎಸ್‌ ವಾಹನದ ಮೇಲೆ ಹಾಲು ಮಾರಲು ಹೊರಟ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಸ್ಥಳದಲ್ಲಿದ್ದ ಜನರು ಆಂಬುಲೆನ್ಸ್‌ ಮೂಲಕ ಯುವಕರನ್ನು ಕಲಬುರಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next