Advertisement

80 ಅಡಿ ಕಂದಕಕ್ಕೆ ಉರುಳಿದ ಕಾರು ; ಬಂಟ್ವಾಳ ಮೂಲದ ನಾಲ್ವರ ದುರ್ಮರಣ

10:28 AM Feb 18, 2019 | Team Udayavani |

ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದ ಸಮೀಪ ವ್ಯಾಗನರ್ ಕಾರೊಂದು 80 ಅಡಿ ಕಂದಕಕ್ಕೆ ಕಾರೊಂದು ಉರುಳಿಬಿದ್ದು ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟು ಮತ್ತೆ ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

Advertisement

ಮೃತಪಟ್ಟವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಶ್ವನಾಥ್ (55), ಪುಷ್ಪಾವತಿ (48) ಮತ್ತು ರಾಹುಲ್ ರೈ (58), ಮಮತಾ (51) ದಂಪತಿಗಳೆಂದು​​​​​​​ ತಿಳಿದುಬಂದಿದೆ. ಮತ್ತೊಬ್ಬ ಗಾಯಾಳು ಸಂಜು ಶೆಟ್ಟಿ ಅವರನ್ನು ಕಳಸದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಮೂಡಿಗೆರೆ ತಾಲೂಕಿನ ಬಾಳೆಹೊಳೆಯಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿರುವುದಾಗಿ ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next