Advertisement

ಬಲವಂತದಿಂದ ಉಗ್ರನಾದೆ: ಕಾಶ್ಮೀರೀ ಯುವಕರ ಪಾಡು ಬಿಚ್ಚಿಟ್ಟ ಉಗ್ರ Watch

03:19 PM Apr 29, 2017 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ಯುವಕರನ್ನು ಬಲವಂತವಾಗಿ ಉಗ್ರವಾದಿಗಳನ್ನಾಗಿ ಮಾಡಲಾಗುತ್ತಿದೆಯೇ ? ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಭದ್ರತಾ ಪಡೆಗಳ ವಿರುದ್ಧ ಹೋರಾಡುವಂತೆ ಅವರನ್ನು ಬಲವಂತಪಡಿಸಲಾಗುತ್ತಿದೆಯೇ ? ಹೌದು ಎನ್ನುತ್ತಾನೆ ಮೊನ್ನೆ ಮೊನ್ನೆ ಶ್ರೀನಗರದಲ್ಲಿ ಭದ್ರತಾ ಸಿಬಂದಿಗಳ ಕೈಗೆ ಸಿಕ್ಕಿ ಬಿದ್ದ ಬ್ಯಾಂಕ್‌ ಲೂಟಿಕೋರ ಉಗ್ರ. 

Advertisement

ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಯ ಮೆಹಂದಿ ಕದಲ್‌ ನಲ್ಲಿನ ತೆಹಶೀಲ್‌ನಲ್ಲಿರುವ ಜಮ್ಮು ಕಾಶ್ಮೀರ ಬ್ಯಾಂಕ್‌ ಶಾಖೆಯಲ್ಲಿ ಲೂಟಿ ಮಾಡಲು ಬಂದ ಇಬ್ಬರು ಉಗ್ರರ ಪೈಕಿ ಭದ್ರತಾ ಸಿಬಂದಿಗಳ ಕೈಗೆ ಸಿಕ್ಕಿ ಬಿದ್ದ ಉಗ್ರನೋರ್ವನ ಹೇಳಿಕೆಯ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಬಲವಂತಪಡಿಸಲಾಗುತ್ತಿದೆ ಎಂಬುದು ಇದೀಗ ಬಹಿರಂಗವಾಗಿದೆ.

ಜಮ್ಮು ಕಾಶ್ಮೀರ ಬ್ಯಾಂಕ್‌ ಲೂಟಿಗೆ ಬಂದಿದ್ದ ಇಬ್ಬರು ಉಗ್ರರಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಓರ್ವ ಉಗ್ರ ಭದ್ರತಾ ಸಿಬಂದಿಗಳತ್ತ ಗುಂಡೆಸೆದು ಪರಾರಿಯಾಗಿದ್ದ. ಇನ್ನೋರ್ವ ಉಗ್ರ ಸಿಕ್ಕಿಬಿದ್ದಿದ್ದ.

ಭದ್ರತಾ ಸಿಬಂದಿಗಳ ಕೈಗೆ ಸಿಕ್ಕಿ ಬಿದ್ದ ಉಗ್ರ, ಜಮ್ಮು ಕಾಶ್ಮೀರದಲ್ಲಿನ ಯುವಕರನ್ನು ಶಸ್ತ್ರಾಸ್ತ್ರ ಕೈಗೆತ್ತಿಕೊಂಡು ಸೇನೆಯ ವಿರುದ್ಧ ಹೋರಾಡುವಂತೆ ಹೇಗೆ ಬಲವಂತ ಪಡಿಸಲಾಗುತ್ತಿದೆ ಎಂಬುದನ್ನು ಬಾಯಿಬಿಟ್ಟಿದ್ದಾನೆ. ತಾನು ಸ್ವತಃ ಆ ರೀತಿ ಬಲವಂತಕ್ಕೆ ಗುರಿಯಾದ ದುರದೃಷ್ಟಶಾಲಿ ಯುವಕ ಎಂದಾತ ಹೇಳಿಕೊಂಡಿದ್ದಾನೆ. ತನ್ನಂತೆ ಇತರ ಅಸಂಖ್ಯ ಕಾಶ್ಮೀರೀ ಯುವಕರು ಇದೇ ಪಾಡನ್ನು ಅನುಭವಿಸುತ್ತಿದ್ದಾರೆ ಎಂದಾತ ಹೇಳಿದ್ದಾನೆ. ಆತನ ಮಾತುಗಳು ಇಲ್ಲಿರುವ ವಿಡಿಯೋದಲ್ಲಿ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next