Advertisement
ವಿಜ್ಞಾನನಗರದ ಪ್ರಮೀಳಾ ಮತ್ತು ಈಕೆಯ ಪುತ್ರಿ ರಮ್ಯಾ ಹಾಗೂ ಅಪ್ರಾಪ್ತ ಪುತ್ರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಮೇ 2ರಂದು ದೆವ್ವ ಬಿಡಿಸುವ ನೆಪದಲ್ಲಿ ಗಾಯಿತ್ರಿ ಎಂಬುವವರ 13 ವರ್ಷದ ಮಗಳು ಶರಣ್ಯ ಎಂಬಾಕೆಯನ್ನು ಹತ್ಯೆಗೈದಿದ್ದರು. ಬಳಿಕ ಸಂತ್ರಸ್ತೆ ತಾಯಿ ವಿರುದ್ಧವೇ ಕೊಲೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ದೇವಿ ಕೋಪವಾಗುತ್ತಾಳೆ: ಏಕಾಏಕಿ ಪುತ್ರಿ ಮೃತಪಟ್ಟಿದ್ದರಿಂದ ಆತಂಕಗೊಂಡ ಗಾಯಿತ್ರಿ ಸ್ನೇಹಿತೆ ಪ್ರಮೀಳಾಗೆ ತಿಳಿಸಿದ್ದಾಳೆ. ಆದರೆ, ಈ ವಿಚಾರವನ್ನು ಯಾವುದೇ ಕಾರಣಕ್ಕೂ ಹೊರಗಡೆ ಹೇಳಬೇಡ. ಒಂದು ವೇಳೆ ಹೇಳಿದರೆ ದೇವಿ ಕೋಪಗೊಳ್ಳುತ್ತಾಳೆ. ನಿನ್ನ ಮಗಳ ವರ್ತನೆಯಿಂದ ಕೋಪಗೊಂಡು ಆಕೆಯ ಬಲಿ ಪಡೆದುಕೊಂಡಿದ್ದಾಳೆ ಎಂದು ಪ್ರಮೀಳಾ ಬೆದರಿಕೆ ಹಾಕಿದ್ದಾಳೆ. ಇದರಿಂದ ಹೆದರಿದ ಗಾಯಿತ್ರಿ ಯಾರಿಗೂ ವಿಷಯ ತಿಳಿಸಿರಲಿಲ್ಲ.
ತಾಯಿ ವಿರುದ್ಧವೇ ದೂರು: ಇದೇ ವೇಳೆ ಕೊಲೆ ಆರೋಪ ತನ್ನ ಮೇಲೆ ಬರುತ್ತದೆ ಎಂದು ಹೆದರಿದ ಪ್ರಮೀಳಾ, ಕೂಡಲೇ ಠಾಣೆಗೆ ಹೋಗಿ ಗಾಯಿತ್ರಿ ವಿರುದ್ಧವೇ ಪುತ್ರಿ ಕೊಂದ ಆರೋಪದ ದೂರು ನೀಡಿದ್ದಾರೆ. ಈ ಸಂಬಂಧ ಶರಣ್ಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಗಾಯಿತ್ರಿ ಗೊಂದಲದ ಹೇಳಿಕೆ ನೀಡಿದ್ದಾರೆ.
ಜತೆಗೆ ಗಾಯಿತ್ರಿ ಮನೆ ಪರಿಶೀಲಿಸಿದಾಗ ಹಲ್ಲೆಯ ಯಾವುದೇ ಕುರುಹು ಪತ್ತೆಯಾಗುವುದಿಲ್ಲ. ಕೊನೆಗೆ ದೆವ್ವದ ವಿಚಾರ ಬಂದಾಗ ಪ್ರಮೀಳಾ ಹೆಸರನ್ನು ಗಾಯಿತ್ರಿ ಹೇಳಿದ್ದರು. ಈ ಸಂಬಂಧ ಪ್ರವೀಳಾ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.