Advertisement

ಭಾರತಕ್ಕೆ ಮರಳಿದರೆ ಜೀವಕ್ಕೆ ಆಪಾಯ: ಕೋರ್ಟಿಗೆ ನೀರವ್‌ ಮೋದಿ

12:41 PM Jan 05, 2019 | udayavani editorial |

ಮುಂಬಯಿ : ‘ಪ್ರಾಣ ಬೆದರಿಕೆ ಇರುವ ಕಾರಣ ನಾನು ಭಾರತಕ್ಕೆ ಮರಳುವುದಿಲ್ಲ; ಮೇಲಾಗಿ ನನ್ನ ವಿರುದ್ಧದ ಕೇಸನ್ನು ರಾಜಕೀಯಗೊಳಿಸಲಾಗಿದೆ’ ಎಂದು ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,000 ಕೋಟಿ ರೂ ವಂಚನೆ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಇಲ್ಲಿನ ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ ಹೇಳಿಸಿದ್ದಾರೆ. 

Advertisement

ಆರ್ಥಿಕ ಅಪರಾಧಿಗಳ ನೂತನ ಕಾಯಿದೆಯಡಿ ನೀರವ್‌ ಮೋದಿಯನ್ನು ‘ತಲೆಮರೆಸಿಕೊಂಡ ಆರ್ಥಿಕ ಅಪರಾಧಿ’ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಕೋರ್ಟಿಗೆ ಸಲ್ಲಿಸಿರುವ ಮನವಿಗೆ ಉತ್ತರವಾಗಿ ನೀರವ್‌ ಮೋದಿ ಅವರ ವಕೀಲರು ಈ ವಿಷಯವನ್ನು ಕೋರ್ಟಿಗೆ ಅರುಹಿದರು. 

‘ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ’ ಎಂದು ಮದ್ಯ ದೊರೆ ವಿಜಯ್‌ ಮಲ್ಯ ಅವರನ್ನು ಇಲ್ಲಿನ ನ್ಯಾಯಾಲಯ ಇಂದು ಶನಿವಾರ ಘೋಷಿಸಿರುವಂತೆ ನೀರವ್‌ ಮೋದಿಯನ್ನು ಕೂಡ ಅದೇ ರೀತಿಯ ಅಪರಾಧಿ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next