Advertisement

ಪಕ್ಷ, ಚಿಹ್ನೆ ಬದಲಾದರೂ ಅಭ್ಯರ್ಥಿಗಳು ಒಂದೇ!

11:03 PM Nov 24, 2019 | Lakshmi GovindaRaj |

ಬೆಳಗಾವಿ: ಚುನಾವಣೆಗೆ ನಿಲ್ಲಲೇಬೇಕು. ಶಾಸಕನಾಗಿ ಆಯ್ಕೆಯಾಗಬೇಕೆಂಬ ಗುರಿಯೊಂದಿಗೆ ಪಕ್ಷವನ್ನೇ ಬದಲಾಯಿಸಿದ ಕಾಗವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಕಾಗೆ ಅವರಿಗೆ ಇದು ಎರಡನೇ ಉಪ ಚುನಾವಣೆ. 1957ರಿಂದ ಇದುವರೆಗೆ ನಡೆದ ಚುನಾವಣೆಗಳ ಇತಿಹಾಸದಲ್ಲಿ ಕಾಗವಾಡ ಕ್ಷೇತ್ರಕ್ಕೆ ಇದು ಎರಡನೇ ಉಪ ಚುನಾವಣೆ.

Advertisement

ಮೊದಲ ಬಾರಿ ಉಪ ಚುನಾವಣೆ ನಡೆದಿದ್ದು 2000ರಲ್ಲಿ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪಾಸಗೌಡ ಅಪ್ಪಗೌಡ ಪಾಟೀಲ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ 2000ರಲ್ಲಿ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ರಾಜು ಕಾಗೆ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿದ್ದರು. ರಾಜ್ಯದ ರಾಜಕೀಯ ಬದಲಾವಣೆಯಿಂದಾಗಿ 2ನೇ ಬಾರಿಗೆ ಕಾಗವಾಡದ ಮತದಾರರು ಉಪಚುನಾವಣೆ ಎದುರಿಸುವಂತಾಗಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿದ್ದ ರಾಜು ಕಾಗೆ ಉಪಚುನಾವಣೆಯಲ್ಲಿಯೂ ತಮಗೆ ಬಿಜೆಪಿ ಟಿಕೆಟ್‌ ಸಿಗುತ್ತದೆ ಎಂದು ಭಾವಿಸಿ ದ್ದರು. ಆದರೆ, ಬಿಜೆಪಿ ಸರ್ಕಾರ ರಚನೆಗಾ ಗಿಯೇ ಮೈತ್ರಿ ಸರ್ಕಾರದಿಂದ ರಾಜೀನಾಮೆ ನೀಡಿ ಹೊರ ಬಂದ ಶಾಸಕರಿಗೆ ಬಿಜೆಪಿ ಟಿಕೆಟ್‌ ಎಂದು ಮಾತು ಕೊಟ್ಟಿದ್ದರಿಂದ ರಾಜು ಕಾಗೆ ಅನಿವಾರ್ಯವಾಗಿ ಕಾಂಗ್ರೆಸ್‌ ಸೇರಿ ಮತ್ತೆ ಚುನಾವಣೆಗೆ ಸಿದ್ಧರಾಗಿದ್ದಾರೆ.

ಕಾಗವಾಡದ ಚುನಾವಣಾ ಇತಿಹಾಸ ಮೆಲುಕು ಹಾಕಿದರೆ ಮೊದಲು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರ 2004ರಿಂದ ಸತತ ಮೂರು ಚುನಾವಣೆಗಳಲ್ಲಿ ಬಿಜೆಪಿ ವಶವಾಗಿತ್ತು. 2000ರ ಉಪಚುನಾವಣೆ ಸೇರಿ ಸತತ ನಾಲ್ಕು ಸಲ ಈ ಕ್ಷೇತ್ರದ ಮೇಲೆ ರಾಜು ಕಾಗೆ ಹಿಡಿತ ಸಾಧಿಸಿದ್ದರು.

ವ್ಯಕ್ತಿ ನೋಡಿ ಮತ: ಇದುವರೆಗೆ 13 ಚುನಾವಣೆಗಳನ್ನು ಕಂಡಿರುವ ಕಾಗವಾಡ ಆರು ಬಾರಿ ಕಾಂಗ್ರೆಸ್‌ಗೆ ಒಲಿದಿದೆ. 3 ಬಾರಿ ಬಿಜೆಪಿ ವಶ ಮಾಡಿಕೊಂಡಿದೆ. ಕೆಲವು ಬಾರಿ ಇಲ್ಲಿಯ ಮತದಾರರು ವ್ಯಕ್ತಿಯನ್ನು ನೋಡಿ ಮಣೆ ಹಾಕಿದ್ದಾರೆ. 1967ರ ಚುನಾವಣೆಯಲ್ಲಿ ಕಾಂಗ್ರೆಸ್‌ದಿಂದ ಸ್ಪರ್ಧಿಸಿ ಜಯಗಳಿಸಿದ್ದ ಚಂಪಾ ಬಾಯಿ ಬೋಗಲೆ ಈ ಕ್ಷೇತ್ರದ ಏಕೈಕ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Advertisement

1962ರಿಂದ 1978ರವರೆಗೆ ಕಾಗವಾಡ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 1983ರಲ್ಲಿ ವಿ.ಎಲ್‌. ಪಾಟೀಲ ಜನತಾಪಕ್ಷ ದಿಂದ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ ಅಧಿಪತ್ಯಕ್ಕೆ ಅಂತ್ಯ ಹಾಡಿದರು. 1983ರಿಂದ 2000ರ ಉಪಚುನಾವಣೆಯ ವರೆಗೆ ಈ ಕ್ಷೇತ್ರ ಕಾಂಗ್ರೆಸ್‌ ಹಾಗೂ ಜನತಾದಳದ ಮಧ್ಯೆ ಹೊಯ್ದಾಡಿತು. 2004ರ ಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ರಾಜು ಕಾಗೆ 3 ಸಾವಿರ ಮತಗಳ ಅಂತರ ದಿಂದ ಕಾಂಗ್ರೆಸ್‌ನ ಕಿರಣ ಪಾಟೀಲ ವಿರುದ್ಧ ಜಯಗಳಿಸುವ ಮೂಲಕ ಇದು ಬಿಜೆಪಿ ಭದ್ರಕೋಟೆಯಾಗುವಂತೆ ಮಾಡಿದರು.

18 ತಿಂಗಳ ಬಳಿಕ ಮತ್ತೆ ಕುಸ್ತಿ: 2018ರಲ್ಲಿ ನಡೆದ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ ಮೂಲಕ ಮತ್ತೆ ಈ ಕ್ಷೇತ್ರ ಕಾಂಗ್ರೆಸ್‌ ಪಾಲಾದರೂ ಅದು ಬಹಳ ಕಾಲ ಉಳಿಯಲಿಲ್ಲ. ಬದಲಾದ ರಾಜಕೀಯದ ಚದುರಂಗ ದಾಟದಲ್ಲಿ ಕಾಂಗ್ರೆಸ್‌ ಶಾಸಕರೇ ಬಿಜೆಪಿ ಮನೆ ಸೇರಿದರು. ಅದರ ಫಲವಾ ಗಿಯೇ ಈಗ ಉಪ ಚುನಾವಣೆ ನಡೆಯುತ್ತಿದೆ. 18 ತಿಂಗಳ ಹಿಂದೆ ಪರ ಸ್ಪರ ಎದುರಾಳಿಗಳಾಗಿದ್ದ ಶ್ರೀಮಂತ ಪಾಟೀಲ ಹಾಗೂ ರಾಜು ಕಾಗೆ ಈಗ ಮತ್ತೆ ಎದುರಾಳಿಯಾಗಿದ್ದಾರೆ. ಅದರೆ ಅವರ ಚಿಹ್ನೆ ಹಾಗೂ ಪಕ್ಷಗಳು ಬದ ಲಾಗಿವೆ. ಮತದಾರರು ಚಿಹ್ನೆ ನೋಡಿಯೋ ಅಥವಾ ಅಭ್ಯರ್ಥಿ ಯನ್ನು ನೋಡಿ ಮತಹಾಕುವರೇ ಎಂಬ ಕುತೂಹಲ ಕ್ಷೇತ್ರದಲ್ಲಿದೆ.

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next