Advertisement

ಅನುಮತಿ ಇಲ್ಲದ ಜೆಡಿಎಸ್‌ ಸಭೆ ರದ್ದು

06:01 PM Oct 18, 2020 | Suhan S |

ಕೋಲಾರ: ಜಿಲ್ಲಾಡಳಿತದ ಅನುಮತಿ ಪಡೆಯದೇ ಜಾತ್ಯತೀತ ಜನತಾದಳ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ರದ್ದಾದ ಘಟನೆ ನಗರದಲ್ಲಿ ಶನಿವಾರ ನಡೆಯಿತು.

Advertisement

ತಾಲೂಕು ಜೆಡಿಎಸ್‌ ಅಧ್ಯಕ್ಷರು ಚುನಾವಣಾ ಸಂಬಂಧ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಶಾಸಕರಾದ ಶ್ರೀನಿವಾಸಗೌಡ, ಗೋವಿಂದರಾಜು,ಅಭ್ಯರ್ಥಿ ಚೌಡರೆಡ್ಡಿ ನೇತೃತ್ವದಲ್ಲಿ ಈ ಸಭೆ ನಡೆಯುತ್ತದೆ ಎಂದು ತಿಳಿಸಲಾಗಿತ್ತು. ಈಹಿನ್ನಲೆಯಲ್ಲಿ ಆರ್‌ಟಿಒ ಕಚೇರಿ ಸಮೀಪದ ಜೆಡಿಎಸ್‌ ನಿವೇಶನದಲ್ಲಿ ಬೃಹತ್‌ ಪೆಂಡಾಲ್‌ ಹಾಕಿ ವೇದಿಕೆ ಸಿದ್ಧಪಡಿಸಲಾಗಿತ್ತು. ಈ ಸಭೆಗೆ ಜೆಡಿಎಸ್‌ನ ಹಲವಾರುಮುಖಂಡರು, ಕಾರ್ಯಕರ್ತರು ಆಗಮಿಸಿದ್ದರಾದರೂ, ಚುನಾವಣಾ ಪ್ಲೆಯಿಂಗ್‌ ಸ್ಕ್ಯಾಡ್‌ ಅಧಿಕಾರಿಗಳು ಬಂದು ಸಭೆಗೆ ಅನುಮತಿ ಪಡೆದಿರುವಿರಾಎಂದುಪ್ರಶ್ನಿಸಿದಾಗಮುಖಂಡರು ತಬ್ಬಿಬ್ಟಾದರು.

ರದ್ದಾಯಿತು: ಕೋವಿಡ್‌ ಮಾರ್ಗಸೂಚಿ ಪಾಲಿಸಿಲ್ಲ, ಸಭೆಗೆ ಅನುಮತಿ ಪಡೆದಿಲ್ಲ, ಸಭೆ ನಡೆಸಲು ಬಿಡೋದಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗಕೂಡಲೇ ಮಧ್ಯಾಹ್ನ3 ಗಂಟೆಗಾದರೂ ಅನುಮತಿ ಪಡೆದು ಸಭೆ ನಡೆಸುವ ಪ್ರಯತ್ನಕ್ಕೆ ಮುಖಂಡರು ಮುಂದಾದರು. ಶಾಸಕರು, ಮುಖಂಡರು ಒತ್ತಡ ಹಾಕಿದರೂ ಅಧಿಕಾರಿಗಳು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಜೆಡಿಎಸ್‌ ಮುಖಂಡರಾದ ಬಾಬು ಮೌನಿ, ಬಣಕನಹಳ್ಳಿ ನಟರಾಜ್‌, ತೂಪಾಲ್ಲಿ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next