Advertisement

ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆ: ಭಾರತ ಮಾತಾ ಮಂದಿರ ವಿರೂಪ

09:40 PM Jul 08, 2023 | Team Udayavani |

ಟೊರಾಂಟೋ: ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಹೊಸ ಬೆಳವಣಿಗೆ ಎಂಬಂತೆ ಟೊರಾಂಟೋದ ಹೊರ ಭಾಗದಲ್ಲಿ ಇರುವ ಭಾರತ ಮಾತೆಯ ಮಂದಿರವನ್ನು ವಿರೂಪಗೊಳಿಸಲಾಗಿದೆ.

Advertisement

ಭಾರತದ ಹೈಕಮಿಷನರ್‌ ಸಂಜಯ ಕುಮಾರ್‌ ವರ್ಮಾ ಮತ್ತು ದೂತವಾಸದ ಅಧಿಕಾರಿ ಅಪೂರ್ವ ಶ್ರೀವಾಸ್ತ ಅವರ ವಿರೂಪಗೊಳಿಸಲಾದ ಪೋಟೋಗಳನ್ನು ಅಂಟಿಸಲಾಗಿದೆ.

ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಂದ ಭಾರತದ ವಿರುದ್ಧ ಟೊರಾಂಟೋದಲ್ಲಿ ಬೃಹತ್‌ ರ್ಯಾಲಿ ನಡೆದಿದೆ. ಅದಕ್ಕೆ ಪೂರಕವಾಗಿ ಕೆನಡಾದಲ್ಲಿ ಇರುವ ಭಾರತದ ಪರ ಅಭಿಮಾನಿಗಳು ಮತ್ತೂಂದು ರ್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ. ಖಲಿಸ್ತಾನ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ನ ನಿಗೂಢ ಸಾವಿಗೆ ಭಾರತ ಸರ್ಕಾರವೇ ಕಾರಣ ಎಂಬ ಆರೋಪವನ್ನು ಖಲಿಸ್ತಾನ ಉಗ್ರರು ಮಾಡುತ್ತಿದ್ದಾರೆ. ಜತೆಗೆ ಪದೇ ಪದೆ ಭಾರತದ ವಿರುದ್ಧ ದುರ್ವರ್ತನೆಗಳನ್ನು ತೋರಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next