Advertisement

ಎರಡು ಆಪರೇಷನ್‌ ಮುಗಿಸಿ ಬಂದು ಆತ್ಮಹತ್ಯೆ ಮಾಡಿಕೊಂಡ ಡಾಕ್ಟರ್‌

12:30 PM Mar 21, 2017 | |

ಬೆಂಗಳೂರು: ಸೋಮಸುಂದರ ಪಾಳ್ಯದ ಶೋಭಾ ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಜಿಗಿದು ಹಿರಿಯ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ನಾರಾಯಣ ಹೃದಯಾಲಯದ ಹಿರಿಯ ವೈದ್ಯ ಅಶೋಕ್‌ ರಾಜ್‌ ಕೌಲ್‌  (54) ಆತ್ಮಹತ್ಯೆಗೆ ಶರಣಾದವರು.

Advertisement

ಸೋಮವಾರ ಎಂದಿನಂತೆ ಆಸ್ಪತ್ರೆಗೆ ತೆರಳಿ 2-15 ಗಂಟೆ ಸುಮಾರಿಗೆ ಫ್ಲ್ಯಾಟ್‌ಗೆ  ವಾಪಾಸಾಗಿದ್ದ ವೈದ್ಯ ಅಶೋಕ್‌ ರಾಜ್‌, ಬಳಿಕ ಮನೆಯವರ ಬಳಿಯೂ ಮಾತನಾಡದೇ, 10ನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವೈದ್ಯ, ಅಶೋಕ್‌ ರಾಜ್‌ ಕೆಳಗೆ ಬಿದ್ದ ಸದ್ದು ಕೇಳಿದ ಕೂಡಲೇ  ಸೆಕ್ಯೂರಿಟಿ ಗಾರ್ಡ್‌ ಸ್ಥಳಕ್ಕೆ ಧಾವಿಸಿದ್ದಾರೆ.ಅಲ್ಲದೆ  ಕೂಡಲೇ ಫ್ಲ್ಯಾಟ್‌ನಲ್ಲಿದ್ದ ವೈದ್ಯರ ಪುತ್ರಿಗೆ ವಿಷಯ ಮುಟ್ಟಿಸಿದ್ದಾರೆ.

ಆತಂಕದಿಂದ ಸ್ಥಳಕ್ಕೆ ಬಂದ ವೈದ್ಯರ ಪುತ್ರಿ, ತಂದೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ತತ್‌ಕ್ಷಣ ಎಚ್‌ಎಸ್‌ಆರ್‌  ಲೇಔಟ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ರವಾನಿಸಿದ್ದರೂ, ತೀವ್ರ ರಕ್ತಸ್ರಾವದಿಂದ ಅಶೋಕ್‌ ರಾಜ್‌ ಮೃತಪಟ್ಟಿರುವುದು  ಧೃಡಪಟ್ಟಿದೆ. ಈ  ವಿಷಯ ತಿಳಿದ ಕೂಡಲೇ ಅಪಾರ್ಟ್‌ಮೆಂಟ್‌ಗೆ ತೆರಳಿ ಪರಿಶೀಲಿಸಲಾಗಿದೆ. ಅಶೋಕ್‌ ರಾಜ್‌, ಆತ್ಮಹತ್ಯೆಗೂ ಮುನ್ನ ಯಾವುದೇ ಡೆತ್‌ನೋಟ್‌ ಬರೆದಿಟ್ಟಿರಲಿಲ್ಲ. ಕೌಟುಂಬಿಕ ವಿಚಾರಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು. 

ಎರಡು ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಿ ಬಂದಿದ್ದ ಡಾ. ಅಶೋಕ್‌ರಾಜ್‌!: 2003ರಿಂದಲೂ ನಾರಾಯಣ ಹೃದಯಾಲಯದಲ್ಲಿ ಸರ್ಜನ್‌ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಅಶೋಕ್‌ ರಾಜ್‌ ಕೌಲ್‌, ಸೋಮವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದು, ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ 11-30ರ ಸುಮಾರಿಗೆ  ವಾಪಾಸ್‌  ಹೋಗಿದ್ದರು. ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next