Advertisement
ಒಪ್ಪಂದ ಮಾಡಿಕೊಳ್ಳುವಾಗ ಅನುಸರಿಸಿದ ಪ್ರಕ್ರಿಯೆಯ ವಿಶ್ಲೇಷಣೆಗೆ ಸಿಎಜಿ ಹೆಚ್ಚಿನ ಗಮನ ಹರಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಯುಪಿಎ ಸರಕಾರದ ಉದ್ದೇಶಿತ 126 ಯುದ್ಧವಿಮಾನಗಳ ಬೆಲೆ ಹಾಗೂ ಅಂತಿಮ ಒಪ್ಪಂದದ ಬೆಲೆಯನ್ನು ಹೋಲಿಕೆ ಮಾಡಿ ವರದಿ ನೀಡಿದೆ ಎನ್ನಲಾಗಿದೆ. ರಫೇಲ್ ಒಪ್ಪಂದ ನಡೆಯುತ್ತಿರುವಾಗ ರಾಜೀವ್ ಮಹರ್ಷಿಯವರೇ ಹಣಕಾಸು ಕಾರ್ಯದರ್ಶಿ ಯಾಗಿದ್ದರಿಂದ, ಈಗ ಸಿಎಜಿ ಆಗಿರುವ ಅವರೇ ಅದರ ತನಿಖೆ ನಡೆಸಬಾರದು ಎಂದು ಕಾಂಗ್ರೆಸ್ ಆಕ್ಷೇಪಿಸಿದ ಮರುದಿನವೇ ಈ ವರದಿ ಸಲ್ಲಿಕೆಯಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದಿದ್ದು, ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸುವಂತೆ ಕಾಂಗ್ರೆಸ್ ಆಗ್ರಹಿಸುತ್ತಿದೆ.
ಬೆಲೆ ಹೋಲಿಕೆ, ಪ್ರಕ್ರಿಯೆ ವಿಶ್ಲೇಷಣೆ ಮಾಡಿರುವ ಸಿಎಜಿ?