Advertisement

Kerala; ಏಕ ಚುನಾವಣೆ ವಿರುದ್ಧ ಸಂಪುಟ ನಿರ್ಣಯ ಮಂಡನೆ

01:52 AM Oct 11, 2024 | Team Udayavani |

ತಿರುವನಂತಪುರ: ಪಶ್ಚಿಮ ಬಂಗಾಲ ಹಾಗೂ ತಮಿಳುನಾಡು ಸರಕಾರಗಳ ಬಳಿಕ ಈಗ ಕೇರಳ ಸರಕಾರವೂ “ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಖಂಡಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ಮಾಜಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಸಮಿತಿ ಶಿಫಾರಸು ಮಾಡಿದ “ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವದ ಅನುಮೋದನೆಯನ್ನು ಹಿಂಪ­ಡೆಯುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ಕೇರಳ ಸಂಪುಟ ನಿರ್ಣಯ ಕೈಗೊಂಡಿದೆ.

Advertisement

ಈ ಪ್ರಸ್ತಾವವು ಪ್ರಜಾ­ಪ್ರಭುತ್ವ ವಿರೋಧಿ ಹಾಗೂ ಅಸಾಂವಿಧಾನಿಕ ಎಂದು ಸಂಪುಟ ಅಭಿಪ್ರಾಯಪಟ್ಟಿದೆ. ಸಭೆಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ಪರವಾಗಿ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವರಾದ ಎಂ.ಬಿ.­ರಾಜೇಶ್‌ ನಿರ್ಣಯವನ್ನು ಮಂಡಿಸಿ­ದರು. ಈ ಪ್ರಸ್ತಾವವು ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬ­ಲಗೊಳಿಸುತ್ತದೆ ಹಾಗೂ ಪ್ರಜಾಪ್ರಭುತ್ವದ ವಿವಿಧ ಸ್ವರೂಪ ಗಳನ್ನು ಹಾಳು ಮಾಡುತ್ತದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next