Advertisement

ಜನ ಬೀದಿಯಲ್ಲಿ ಕಣ್ಣೀರು ಇಡುತ್ತಿದ್ದರೆ ಅದಕ್ಕೆ ಸಿದ್ದರಾಮಯ್ಯ ಕಾರಣ: ಸಿ.ಟಿ. ರವಿ ಹೇಳಿಕೆ

10:03 AM Feb 10, 2020 | keerthan |

ಚಿಕ್ಕಮಗಳೂರು: ದರಿದ್ರದ ಮೂಲವೇ ಸಿದ್ದರಾಮಯ್ಯ. ಜನ ಬೀದಿಯಲ್ಲಿ ಕಣ್ಣೀರು ಇಡುತ್ತಿದ್ದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಕೊಪ್ಪ ತಾಲೂಕಿನ ಹರಿಹರಪುರ ಪ್ರಭೋದಿನಿ ಗುರುಕುಲದಲ್ಲಿ ಆಯೋಜಿಸಿದ್ದ ಅರ್ಧಮಂಡಲೋತ್ಸವ ಭಾಗವಹಿಸಿದ್ದ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಸಿ.ಎಂ ಯಡಿಯೂರಪ್ಪ ಸರ್ಕಾರ ದರಿದ್ರ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ 11 ಲಕ್ಷ ಮನೆಗೆ ಮಂಜೂರಾತಿ ನೀಡಿದ್ರು ಆದರೆ, ಹಣ ಇಡದೆ ಮನೆಗಳ ಮಂಜೂರಾತಿ ಮಾಡಿದರು. ಹಣ ಇಟ್ಟಿದ್ರೆ ಮನೆ ಅರ್ಧಕ್ಕೆ ನಿಲ್ಲುತ್ತಿರಲಿಲ್ಲ ಚುನಾವಣೆ ವರ್ಷವೆಂದು ವರ್ಷಕ್ಕೆ 2-3 ಲಕ್ಷ ಮನೆಗೆ ಮಂಜೂರಾತಿ ಮಾಡಿದರು ಎಂದು ಟೀಕೆ ಮಾಡಿದರು.

ರಾಮನಗರದಲ್ಲಿ ಆರ್ ಎಸ್ ಎಸ್  ಪಥಸಂಚಲನದ ಬಗ್ಗೆ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಲವು ಬಾರಿ ಸದನದಲ್ಲಿ ನಾನೂ ಸ್ವಯಂ ಸೇವಕನೆಂದು ಪರಿಚಯಿಸಿಕೊಂಡಿದ್ದರು. ನಾನೂ ಸಂಘದ ಪ್ರಾರ್ಥನೆ ಹೇಳ್ತೀನಿ ಎಂದಿದ್ದರು.  ರವಿ, ನಿನಗೆ ಪ್ರಾರ್ಥನೆ ಬರುತ್ತಾ. ನಾನು ಹೇಳ್ತೀನಿ ಅಂತಿದ್ದರು. ಸ್ವಯಂಸೇವಕನ ಭಾವನೆ ಇದ್ದರೆ ಒಳ್ಳೆಯದ್ದನ್ನೇ ಬಯಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next