Advertisement

CPY ಬಾವ ಮಹದೇವಯ್ಯ ಕಿಡ್ನಾಪ್ ಪ್ರಕರಣ… ಚಾಮರಾಜನಗರ ಜಿಲ್ಲೆಯಲ್ಲಿ ಕಾರು ಪತ್ತೆ

08:20 AM Dec 04, 2023 | Team Udayavani |

ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಬಾವ ಮಹದೇವಯ್ಯ ಅವರು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು ಇದೀಗ ಅವರ ಕಾರು ಚಾಮರಾಜನಗರದಲ್ಲಿ ಪತ್ತೆಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

Advertisement

ನಿನ್ನೆ (ಭಾನುವಾರ) ನಾಪತ್ತೆಯಾಗಿದ್ದು ಈ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದಾರೆ ಈ ವೇಳೆ ಅವರ ಮೊಬೈಲ್ ನಂಬರ್ ಟ್ರೇಸ್ ಮಾಡಿದಾದ ಮೊಬೈಲ್ ಲೊಕೇಶನ್ ಮಹದೇಶ್ವರ ಬೆಟ್ಟದ ಮೇಲೆ ತೋರಿಸುತ್ತಿತ್ತು ಇದರ ಜಾಡು ಹಿಡಿದ ಪೊಲೀಸರು ಮಹದೇಶ್ವರ ಬೆಟ್ಟವನ್ನು ಪರಿಶೀಲನೆ ನಡೆಸಿದ್ದಾರೆ ಆದರೆ ಅವರ ಪತ್ತೆ ಕಾರ್ಯ ಆಗಲಿಲ್ಲ ಆದರೆ ಇದೀಗ ಅವರ ಕಾರು ಚಾಮರಾಜನಗರದಲ್ಲಿ ಇರುವುದಾಗಿ ಮಾಹಿತಿ ಬಂದಿದ್ದು ಅದರಂತೆ ರಾಮಾಪುರ ಠಾಣೆಯ ಪೊಲೀಸರು ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕಾರನ್ನು ಪತ್ತೆ ಮಾಡಿದ್ದಾರೆ, ನೈಟ್ ಬೀಟ್ ಪೊಲೀಸರು ಕಾರನ್ನು ಪತ್ತೆಹಚ್ಚಿದ್ದು, ಅಲ್ಲದೆ ಕಾರು ನಿನ್ನೆಯಿಂದ ಇದೆ ಪ್ರದೇಶದಲ್ಲಿ ಇತ್ತು ಎಂದು ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಮಹದೇವಯ್ಯ ಅವರಿಗೆ ಸೇರಿದ ಕಾರು ಎಂಬುದು ಗೊತ್ತಾಗಿದೆ.

ಸದ್ಯ ಚನ್ನಪಟ್ಟಣ ಪೊಲೀಸರು ರಾಮಾಪುರದತ್ತ ಹೊರಟಿದ್ದು ಆದರೆ ಮಹದೇವಯ್ಯ ಅವರ ಪತ್ತೆ ಮಾತ್ರ ಇನ್ನು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Daily Horoscope: ಧೈರ್ಯ, ಸಾಹಸದ ಮನಸ್ಥಿತಿಯೊಂದಿಗೆ ಹೊಸ ಸಪ್ತಾಹಕ್ಕೆ ಪ್ರವೇಶ

Advertisement

Udayavani is now on Telegram. Click here to join our channel and stay updated with the latest news.

Next