Advertisement

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕ-ವಿದರ್ಭ ಪಂದ್ಯ ಡ್ರಾ

03:00 PM Jan 25, 2020 | Team Udayavani |

ನಾಗ್ಪುರ: 23 ವಯೋಮಿತಿಯೊಳಗಿನ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಕೂಟದಲ್ಲಿ ಕರ್ನಾಟಕ – ಆತಿಥೇಯ ವಿದರ್ಭ ನಡುವಿನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.

Advertisement

ಕರ್ನಾಟಕ ತಂಡ ಮೊದಲನೇ ಇನಿಂಗ್ಸ್‌ನಲ್ಲಿ 390 ರನ್‌ಗಳಿಸಿ ಆಲೌಟಾಗಿದ್ದರೆ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 137 ರನ್‌ಗಳಸಿತ್ತು. ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ 583 ರನ್‌ಗಳಿಸಿ ಆಲೌಟಾಗಿತ್ತು.

ಮೊದಲ ಇನಿಂಗ್ಸ್‌ ಮುನ್ನಡೆ ಪಡೆದ ವಿದರ್ಭ 3 ಅಂಕ ಪಡೆದರೆ ಕರ್ನಾಟಕ 1ಅಂಕಕ್ಕೆ ಸಮಾಧಾನಪಟ್ಟುಕೊಂಡಿತು.

ಯುಪಿ ವಿರುದ್ಧದ ಪಂದ್ಯಕ್ಕೆ ರಾಜ್ಯ ತಂಡ ಪ್ರಕಟ:
ಮೈಸೂರಿನಲ್ಲಿ ಜ.29ರಿಂದ ಆರಂಭಗೊಳ್ಳಲಿರುವ ಉತ್ತರ ಪ್ರದೇಶ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ತಂಡವನ್ನು ಕಿಶನ್‌ ಎಸ್‌ ಬೆದರೆ ಮುನ್ನಡೆಸಲಿದ್ದಾರೆ.

ಕರ್ನಾಟಕ ತಂಡ: ಕಿಶನ್‌ ಎಸ್‌ ಬೆದರೆ (ನಾಯಕ), ಲವನೀತ್‌ ಸಿಸೋಡಿಯ (ಉಪನಾಯಕ), ಮನೋಜ್‌ ಬಾಂಡೆ, ಜಯೇಶ್‌ ಬಾಬು, ಬಿ.ಯು .ಶಿವಕುಮಾರ್‌, ಶ್ರೀಕರ, ಸುಜಯ್‌ ಸತೇರಿ, ವಿ.ವೈಶಾಕ್‌, ಅಭಿಲಾಷ್‌ ಶೆಟ್ಟಿ, ಸಂತೋಕ್‌ ಸಿಂಗ್‌, ಕುಶಾಲ್‌ ವಾದ್ವಾನಿ, ಅಭಿಜಿತ್ ಕುತ್ಪಾಡಿ, ತುಷಾರ್‌ ಹರಿಕೃಷ್ಣ, ಸುಜಿತ್‌ ಗೌಡ, ರಿಷಿ ಬೋಪಣ

Advertisement
Advertisement

Udayavani is now on Telegram. Click here to join our channel and stay updated with the latest news.

Next