Advertisement

Heavy Rain ಕುಸಿಯುವ ಭೀತಿಯಲ್ಲಿ ಬೈಂದೂರು ಸೋಮೇಶ್ವರ ಗುಡ್ಡ

12:21 AM Jul 17, 2024 | Team Udayavani |

ಬೈಂದೂರು: ಬೈಂದೂರಿನ ಪಡುವರಿಯ ಸೋಮೇಶ್ವರ ಗುಡ್ಡ ಕುಸಿಯುವ ಭೀತಿಯಲ್ಲಿದೆ. ಒಂದು ವೇಳೆ ಗುಡ್ಡ ಕುಸಿದರೆ ಸೊಮೇಶ್ವರ ಕಡಲತಡಿಯಲ್ಲಿರುವ ಹತ್ತಾರು ಮನೆಗಳಿಗೆ ಅಪಾಯವಾಗುವ ಜತೆಗೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿದೆ.

Advertisement

ಇಲಾಖೆಯ ನಿರ್ಲಕ್ಷ್ಯ: ಅಪಾಯದ ಮುನ್ಸೂಚನೆ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬೈಂದೂರಿನ ವಿವಿಧ ಭಾಗದಲ್ಲಿ ಅಪಾರ ಹಾನಿಯಾಗಿದೆ. ಮಾತ್ರವಲ್ಲದೆ ಒತ್ತಿನೆಣೆ ಗುಡ್ಡ ಕೂಡ ಜರ್ಜರಿತವಾಗಿದೆ. ಹೆದ್ದಾರಿ ಪ್ರಾಧಿಕಾರ ಒಂದಿಷ್ಟು ಮುಂಜಾಗ್ರತೆ ವಹಿಸಿದೆ.

ಆದರೆ ದೊಂಬೆ ರಸ್ತೆಯಲ್ಲಿರುವ ಸೊಮೇಶ್ವರ ಗುಡ್ಡದಲ್ಲಿ ಕಳೆದೆರಡು ವರ್ಷದಿಂದ ಖಾಸಗಿ ವ್ಯಕ್ತಿಯೊಬ್ಬರು ರಸ್ತೆಗಾಗಿ ಗುಡ್ಡ ಕೊರೆದಿರುವುದು ಅಪಾಯಕ್ಕೆ ಆಹ್ವಾನ ನೀಡಿದೆ. ಶೇಡಿಮಣ್ಣಿನ ಈ ಗುಡ್ಡದಲ್ಲಿ ರಸ್ತೆಯ ಬದಿ ತಡೆಗೋಡೆ ನಿರ್ಮಿಸಿಲ್ಲ. ಇದರಿಂದ ಮಳೆಯಲ್ಲಿ ಗುಡ್ಡದ ತಳಪಾಯ ಕೊಚ್ಚಿಹೊಗಿದ್ದು ಮಣ್ಣು ಕುಸಿಯುತ್ತಿದೆ. ಮಳೆ ಮುಂದುವರಿದರೆ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಗಮನಕ್ಕೆ ತಂದರೂ ಕೂಡ ಪಟ್ಟಣ ಪಂಚಾಯತ್‌ ಗಮನಹರಿಸಿಲ್ಲ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next