Advertisement

Byndoor ದರೋಡೆ ಯತ್ನ: ಮೂವರ ಬಂಧನ

11:53 PM Feb 24, 2024 | Team Udayavani |

ಬೈಂದೂರು: ಶಿರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫೆ.21ರಂದು ರಾತ್ರಿ ವೇಳೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವಾಹನಗಳನ್ನು ಅಡ್ಡಹಾಕಿ ದರೋಡೆಗೆ ಯತ್ನಿಸುತ್ತಿದ್ದ ಆರೋಪದಲ್ಲಿ ಮೂವರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ದ್ಯಾನೀಶ್‌ ಮದನಿ, ಕೈಫ್‌, ಅದ್ನಾನ್‌ ಬಂಧಿತರು. ಇತರ ಆರೋಪಿಗಳಾದ ಚಾರು ಯಾನೆ ಶಾರುಖ್‌, ಚಪ್ಪು ಯಾನೆ ಶಫಾನ್‌, ವಾಜೀದ್‌ ಮತ್ತು ನಿಶಾದ್‌ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಾರ್ವಜನಿಕ ವಾಹನಗಳನ್ನು ನಿಲ್ಲಿಸಿ ದರೋಡೆಗೆ ಯತ್ನಿಸುತ್ತಿದ್ದ ಏಳು ಮಂದಿ ಆರೋಪಿಗಳನ್ನು ಹಿಡಿಯಲು ಸುತ್ತುವರಿದರು. ಈ ವೇಳೆ ನಾಲ್ವರು ತಪ್ಪಿಸಿಕೊಂಡರು. ಬಂಧಿತರಿಂದ ಚೂರಿ, ಮೊಬೈಲ್‌, ಕಬ್ಬಿಣದ ರಾಡ್‌, ಮೆಣಸಿನ ಹುಡಿಯ ಪ್ಯಾಕೆಟ್‌, ಮರದ ದೊಣ್ಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೈಂದೂರು ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next