Advertisement

Byndoor: ಹೊಳೆಗೆ ಬಿದ್ದ ಬೈಕ್‌, ಸವಾರ ಪಾರು

01:28 AM Oct 25, 2024 | Team Udayavani |

ಬೈಂದೂರು: ವೇಗವಾಗಿ ಬಂದು ಬೈಕ್‌ ಸವಾರ ನಿಯಂತ್ರಣ ತಪ್ಪಿ ನದಿಗೆ ಹಾರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು ಸಮೀಪದ ನಾಕಟ್ಟೆ ಕಿರು ಸೇತುವೆ ಸಮೀಪ ಗುರುವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಭಟ್ಕಳದಲ್ಲಿ ಮೀನುಗಾರಿಕೆ ವೃತ್ತಿಯ ಉಸ್ಮಾನ್‌ (24) ಬೈಕಿನಲ್ಲಿ ಭಟ್ಕಳದಿಂದ ಕಿರಿಮಂಜೇಶ್ವರದ ಮನೆಗೆ ಬರುತ್ತಿದ್ದಾಗ ನಾಕಟ್ಟೆ ಸೇತುವೆ ಸಮೀಪ ಹೆದ್ದಾರಿಯ ಎಡಕ್ಕೆ ಚಲಿಸಿ ಬೈಕ್‌ ಸಮೇತ ನೇರವಾಗಿ ಹೊಳೆಗೆ ಹಾರಿ ಬಿದ್ದಿದ್ದಾರೆ. ಹೊಳೆ ಆಳವಾಗಿದ್ದ ಕಾರಣ ಬೈಕ್‌ ಮುಳುಗಿ ಹೋಗಿದ್ದು, ಸವಾರ ಉಸ್ಮಾನ್‌ ಈಜಿ ದಡ ಸೇರಿದ್ದಾರೆ. ಅಗ್ನಿ ಶಾಮಕ ದಳ ನದಿಯಲ್ಲಿ ಶೋಧ ನಡೆಸಿ ಬೈಕ್‌ ಮೇಲೆತ್ತಿದ್ದಾರೆ.

ಹೊಳೆಗೆ ಬಿದ್ದು ಸಾವು
ಉಪ್ಪುಂದ: ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಹೊಳೆಗೆ ಬಿದ್ದು ಕೃಷಿಕ ಚಂದ್ರ (45) ಅವರು ಮೃತಪಟ್ಟ ಘಟನೆ ಕಾಲ್ತೊಡು ಗ್ರಾಮದ ಹುಂತನ ಹೊಳೆಯಲ್ಲಿ ಅ. 22ರಂದು ಸಂಭವಿಸಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next