Advertisement

Byjus; ಹತಾಶೆಗೊಂಡ ಪೋಷಕರು ಕಚೇರಿಯಿಂದ ಟಿವಿಯೇ ಹೊತ್ತೊಯ್ದರು!

12:55 AM Feb 23, 2024 | Team Udayavani |

ಹೊಸದಿಲ್ಲಿ: ಬೈಜೂಸ್‌ ಸಂಸ್ಥೆಯಿಂದ ಹಣ ಮರು ಪಾವತಿಯಾಗದ ಹಿನ್ನೆಲೆಯಲ್ಲಿ ಕುಟುಂಬವೊಂದು ಬೈಜೂಸ್‌ ಕಚೇರಿಯಲ್ಲಿದ್ದ ಟಿವಿಯನ್ನೇ ಹೊತ್ತೊಯ್ದಿರುವ ಘಟನೆ ನಡೆದಿದೆ.

Advertisement

ಮೂಲವೊಂದರ ಪ್ರಕಾರ, ಬಳಕೆಯಾಗದ ಟ್ಯಾಬ್ಲೆಟ್‌ ಮತ್ತು ಕಲಿಕಾ ಕಾರ್ಯಕ್ರಮದ ವಿಚಾರವಾಗಿ ಪಾವತಿಸಿದ್ದ ಹಣವನ್ನು ಮರುಪಾವತಿ ಮಾಡುವಂತೆ ಕುಟುಂಬವೊಂದು ಬೈಜೂಸ್‌ ಸಂಸ್ಥೆಯಲ್ಲಿ ಕೇಳಿಕೊಂಡಿದೆ. ಆದರೆ ಮರುಪಾವತಿ ವಿಳಂಬವಾದ ಹಿನ್ನೆಲೆಯಲ್ಲಿ ಬೇಸರಗೊಂಡ ಪೋಷಕರು ಸಂಸ್ಥೆಯ ಕಚೇರಿಗೆ ಭೇಟಿ ನೀಡಿ, ಅಲ್ಲಿದ್ದ ಎಲ್‌ಇಡಿ ಟಿವಿಯನ್ನೇ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.ಇದರ ವೀಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇನ್ನೊಂದೆಡೆ, ಫೆಮಾ ತನಿಖೆಗೆ ಸಂಬಂಧಿಸಿ ಕಲಿಕಾ ಸಂಸ್ಥೆ ಬೈಜೂಸ್‌ನ ಸ್ಥಾಪಕ, ಸಿಇಒ ಬೈಜು ರವೀಂದ್ರನ್‌ ಅವರನ್ನು ವಿದೇಶಕ್ಕೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಜಾರಿ ನಿರ್ದೇಶನಾಲಯ ಲುಕ್‌ಔಟ್‌ ಸಕ್ಯುìಲರ್‌ ಅನ್ನು ನವೀಕರಿಸಿದೆ. ಅಲ್ಲದೆ ವಿವಿಧ ಬಂದರುಗಳಲ್ಲಿ ಅವರ ಚಲನವಲನಗಳ ಮೇಲೆ ಕಣ್ಣಿಡುವಂತೆ ಅಧಿಕಾರಿಗಳಿಗೆ ಇ.ಡಿ. ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next