Advertisement

ಯುವಶಕ್ತಿ ಸದ್ಭಳಕೆಯಿಂದ ದೇಶ ಅಭಿವೃದ್ಧಿ

10:14 AM Jan 13, 2019 | |

ಬ್ಯಾಡಗಿ: ವಿಶ್ವದ ಇನ್ನಿತರ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವುದನ್ನು ನೋಡಿದರೆ ಯುವಶಕ್ತಿ ಸದ್ಭಳಕೆ ಮಾಡಿಕೊಂಡ ದೇಶಗಳಿಗೆ ಉತ್ತಮ ಭವಿಷ್ಯವಿದೆ ಎಂಬುದು ಸಾಬೀತಾಗಿದೆ. ಭಾರತ ಶೇ. 45 ರಷ್ಟು ಯುವಕರನ್ನು ಹೊಂದಿದ್ದರೂ ಇನ್ನೂ ಟೇಕಾಫ್‌ ಆಗದಿರುವುದು ಖೇದಕರ ಸಂಗತಿ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಬಿ.ಎಂ. ಮುಜಾವರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಿಇಎಸ್‌ ಮಹಾವಿದ್ಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ‘ಚೇತನ ಚಿಲುಮೆ’ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಏರ್ಪಡಿಸಿದ್ದ ‘ರಾಷ್ಟ್ರೀಯ ಯುವ ದಿವಸ’ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕ ಕಳೆದರೂ ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಅಪೌಷ್ಟಿಕತೆ, ಬಡತನ ಸೇರಿದಂತೆ ಹಲವಾರು ಸಾಮಾಜಿಕ ಸಮಸ್ಯೆಗಳು ಬಗೆಹರಿದಿಲ್ಲ. ಹಾಗಿದ್ದರೇ ನಮ್ಮಲ್ಲಿನ ಯುವಶಕ್ತಿ ಎತ್ತ ಸಾಗುತ್ತಿದೆ? ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಥವಾ ಪಾತ್ರವೇನು ಎಂಬುದನ್ನು ನಮ್ಮೊಳಗೆ ಒಮ್ಮೆ ಪ್ರಶ್ನೆಗಳನ್ನು ಮಾಡಿಕೊಳ್ಳುವ ಮೂಲಕ ದೇಶಕ್ಕಾಗಿ ನಾನು ನೀಡಿರುವಂತಹ ಕೊಡುಗೆಗಳೇನು ಎಂಬುದನ್ನು ಪ್ರಶ್ನಿಸಿಕೊಳ್ಳುವುದು ಹೆಚ್ಚು ಸೂಕ್ತವಾಗಿದೆ ಎಂದರು.

ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್‌ ಹೊಸ್ಮನಿ ಮಾತನಾಡಿ, ‘ಏಳಿ ಏದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂಬುದಾಗಿ ಯುವಕರನ್ನುದ್ದೇಶಿಸಿ ಸ್ವಾಮಿ ವಿವೇಕಾನಂದ ಅವರು ನುಡಿದಂತಹ ವಾಣಿ ಈ ಸಂದರ್ಭದಲ್ಲಿ ಹೆಚ್ಚು ಸೂಕ್ತವಾಗಿದೆ. ಅವರ ತತ್ವಾದರ್ಶಗಳ ಪಾಲನೆ ಜೊತೆಗೆ ದೇಶದ ಯುವಕರು ತೋರಬೇಕಾದ ಸಾಮೂಹಿಕ ಹೊಣೆಗಾರಿಕೆ ಮರೆತರೆ ಬಹುಶಃ ದೇಶ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಪನ್ಯಾಸ ನೀಡಿ ಮಾತನಾಡಿದ ಪ್ರೊ| ಡಾ| ಎಸ್‌.ಡಿ. ಬಾಲಾಜಿರಾವ್‌, ಜಾಗತೀಕರಣದ ನೆಪದಲ್ಲಿ ದೇಶದ ಯುವ ಸಮೂಹ ಕವಲುದಾರಿಯಲ್ಲಿ ಮುಳುಗಿದ್ದು, ಭಾರತೀಯ ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಪಾಲನೆಯಿಂದ ಹಿಂದೆ ಸರಿಯುತ್ತಿರುವುದು ದುರಂತದ ಸಂಗತಿ, ಯುವಕರು ಇನ್ನೊಬ್ಬರ ತಪ್ಪುಗಳನ್ನು ಪ್ರಶ್ನಿಸುವ ಮೊದಲು, ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಕ್ರೀಯಾಶೀಲರಾಗುವ ಮೂಲಕ ಇನ್ನೊಬ್ಬರಿಗೆ ಆದರ್ಶವಾಗಬೇಕು ಎಂದು ಕರೆ ನೀಡಿದರು.

Advertisement

ಪ್ರಾಚಾರ್ಯ ಕೆ.ಜಿ. ಖಂಡೇಬಾಗೂರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಿಎಸ್‌ಐ ಎಂ.ಎಂ. ಮಹಾಂತೇಶ್‌, ಎಎಸ್‌ಐ ಖಾಜಿ, ಉಪ ತಹಶೀಲ್ದಾರ್‌ ಮೋಹನ ಕಡೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಎಸ್‌.ತಟ್ಟಿ, ಕಾರ್ಯದರ್ಶಿ ಎಚ್.ಎಸ್‌.ಜಾಧವ, ಉಪನ್ಯಾಸಕರಾದ ಡಾ| ಎಸ್‌.ಜಿ. ವೈದ್ಯ, ಪಿ.ಎಂ .ರಾಮಗಿರಿ, ಎಸ್‌.ವಿ. ಉಜ್ಜಯನಿಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next