Advertisement

BY Election: ಸಂಡೂರು ಬಂಡಾಯ ಶಮನ ಮಾಡಿದ ಜನಾರ್ದನ ರೆಡ್ಡಿ

12:57 AM Oct 23, 2024 | Team Udayavani |

 

Advertisement

ಬಳ್ಳಾರಿ: ಸಂಡೂರು ಉಪಚುನಾವಣೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಕೆ.ಎಸ್‌.ದಿವಾಕರ್‌ಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಹುದ್ದೆ ಕೊಡಿಸುವ ಮೂಲಕ ಮಾಜಿ ಸಚಿವ, ಶಾಸಕ ಜಿ. ಜನಾರ್ದನ ರೆಡ್ಡಿ ಪಕ್ಷಕ್ಕೆ ತಟ್ಟಿದ್ದ ಬಂಡಾಯದ ಬಿಸಿ ಶಮನಗೊಳಿಸಿದ್ದಾರೆ.

ನಗರದ ತಮ್ಮ ನಿವಾಸದ ಬಳಿಯ ಕಚೇರಿಯಲ್ಲಿ ಕೆ.ಎಸ್‌ .ದಿವಾಕರ್‌ ಮತ್ತವರ ಬೆಂಬಲಿಗರೊಂದಿಗೆ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಕೆ.ಎಸ್‌.ದಿವಾಕರ್‌ ಅವರಿಗೆ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿರುವ ಆದೇಶ ಪ್ರತಿ ನೀಡಿ ಸಮಾಧಾನಪಡಿಸಿದ ಜನಾರ್ದನ ರೆಡ್ಡಿ, ದಿವಾಕರ್‌ ಪಕ್ಷ ಬಿಟ್ಟು ಹೋಗಲ್ಲ. ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ. ಜತೆಗೆ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲೂ ಭಾಗವಹಿಸಲಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next