Advertisement

By Election: ಎಚ್‌ಡಿಕೆ ಯಾವ ಒಕ್ಕಲಿಗ ನಾಯಕ ಬೆಳೆಯುವುದನ್ನೂ ಸಹಿಸಲ್ಲ: ಡಿ.ಕೆ.ಸುರೇಶ್‌

11:17 PM Oct 27, 2024 | Esha Prasanna |

ರಾಮನಗರ: ರಾಜೀನಾಮೆ ನೀಡಿದಾಗಲೇ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಗನನ್ನು ಇಲ್ಲಿಂದ ಎಂಎಲ್‌ಎ ಮಾಡುವ ಆಸೆ ಇತ್ತು. ಕುಮಾರಸ್ವಾಮಿ ಯಾವ ಒಕ್ಕಲಿಗ ನಾಯಕ ಬೆಳೆಯುವುದನ್ನೂ ಸಹಿಸಿಕೊಳ್ಳುವುದಿಲ್ಲ. ಅವರವರ ನಡುವೆಯೇ ಕಿತ್ತಾಟ ತಂದು ಅವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಎಚ್‌ಡಿಕೆ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿ, ಚನ್ನಪಟ್ಟಣದ ಕೆರೆಗಳನ್ನು ತುಂಬಿಸಿದರು ಎಂದು ಯೋಗೇಶ್ವರ್‌ಗೆ ಬೆಳ್ಳಿಕಿರೀಟ ಹಾಕಿ ಮೆರವಣಿಗೆ ಮಾಡಿದಿರಿ. ಆದರೆ ಚುನಾವಣೆಯಲ್ಲಿ ನೀರುಕೊಟ್ಟವರನ್ನು ಜನತೆ ಮರೆತುಬಿಟ್ಟಿರಿ. ಯೋಗೇಶ್ವರ್‌ ಮೇಲೆ ಎರಡು ಬಾರಿ ಗೆದ್ದಿದ್ದೀನಿ ಅಂತ ಹೇಳಿ ಎಚ್‌ಡಿಕೆ ಅವರಿಗೆ ಟಿಕೆಟ್‌ ಕೊಡಬಹುದಿತ್ತು. ಆಗ ಅವರ ಹೃದಯ ಶ್ರೀಮಂತಿಕೆ ಗೊತ್ತಾಗೊದು ಎಂದು ಲೇವಡಿ ಮಾಡಿದರು.

ತಮ್ಮನ್ನು ನಂಬಿಕೊಂಡು ಬಂದ ಯೋಗೇಶ್ವರ್‌ ಅವರಿಗೆ ಟಿಕೆಟ್‌ ಕೊಡುವ ಬದಲು, ಸಭೆ ಮಾಡಿ ಮಗನಿಗೆ ಚನ್ನಪಟ್ಟಣ ಪ್ರವಾಸ ಮಾಡು ಎಂದರು. ಇವರ ಎಲ್ಲಾ ಆಟ ನೋಡಿ ಯೋಗೇಶ್ವರ್‌ ಕಾಂಗ್ರೆಸ್‌ ಪಕ್ಷಕ್ಕೆ ಬಂದರು. ಯೋಗೇಶ್ವರ್‌ ಜೊತೆ ವೇದಿಕೆ ಹಂಚಿಕೊಳ್ಳುತ್ತೇನೆ ಎಂದು ನಾವು ಕನಸಿನಲ್ಲಿಯೂ ಎಣಿಸಿರಲಿಲ್ಲ. ಯೋಗೇಶ್ವರ್‌ ತತ್ವ-ಸಿದ್ಧಾಂತ ಒಪ್ಪಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಾವು ಅಭಿವೃದ್ಧಿಗಾಗಿ ಒಂದಾಗಿದ್ದೇವೆ. ಯೋಗೇಶ್ವರ್‌ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣಕ್ಕೆ ಮುನ್ನುಡಿ ಬರೆಯೋಣ ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next