Advertisement

ಬಿ.ವಿ.ಶ್ರೀನಿವಾಸ್ ಗೆ ರನ್ನಿಂಗ್ ರೇಸ್ ನಲ್ಲಿ ಉಜ್ವಲ ಭವಿಷ್ಯವಿದೆ: ಸಿ.ಟಿ.ರವಿ ಟಾಂಗ್‌

12:53 PM Jun 14, 2022 | Team Udayavani |

ಚಿಕ್ಕಮಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಗೆ ಉಜ್ವಲ ಭವಿಷ್ಯವಿದೆ. ಆದರೆ ರಾಜಕಾರಣದಲ್ಲಿ ಅಲ್ಲ, ರನ್ನಿಂಗ್ ರೇಸ್ ನಲ್ಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ನೋಡುತ್ತಿದ್ದೆ. ಶ್ರೀನಿವಾಸ ಅವರದ್ದು ಕ್ಷಣಮಾತ್ರದಲ್ಲಿ ಮಿಂಚಿನ ಓಟ. ಯಾವುದಾದರೂ ಅಥ್ಲೆಟಿಕ್ಸ್ ಸ್ಪರ್ಧೆಗೆ ಹೋದರೆ ಪ್ರಶಸ್ತಿ ಖಂಡಿತ ಸಿಗುತ್ತದೆ ಎಂದು ವ್ಯಂಗ್ಯವಾಡಿದರು.

ನಾನು ಚಳುವಳಿ ಮೂಲಕ ಬಂದು ಜೈಲಿಗೆ ಹೋಗಿದ್ದೇನೆ. ಹತ್ತಾರು ಪೊಲೀಸ್ ಸ್ಟೇಷನ್ ಗಳಲ್ಲಿ ಒದೆ ತಿಂದಿದ್ದೇನೆ. ಆದರೆ ಪೊಲೀಸರಿಗೆ ಬೆನ್ನು ತೋರಿಸಿ ಓಡಿ ಹೋಗಿಲ್ಲ. ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವ ಕಳ್ಳರಿಗೆ ಶ್ರೀನಿವಾಸ್ ಮಾದರಿಯಾಗುತ್ತಾರೆ ಎಂದು ಮತ್ತೆ ಶ್ರೀನಿವಾಸ್ ಕಾಲೆಳೆದರು.

ಅಂಬೇಡ್ಕರ್ ಹೇಳಿದ್ದರಾ? : ಭ್ರಷ್ಟಾಚಾರ ಮಾಡಿದರೂ ಯಾರು ಕೂಡ ಕ್ರಮ ತೆಗೆದುಕೊಳ್ಳಬಾರದು ಎಂದರೆ ಹೇಗೆ? ಸಿದ್ದರಾಮಯ್ಯನವರು ಇದನ್ನೇ ಓದಿ ಕಲಿತಿದ್ದೆ? ಭ್ರಷ್ಟರನ್ನು ರಕ್ಷಣೆ ಮಾಡಿ ಎಂದು ಅಂಬೇಡ್ಕರ್ ಹೇಳಿದ್ದಾರಾ ಎಂದು ಸಿ.ಟಿ.ರವಿ ತಿರುಗೇಟು ನೀಡಿದರು.

ಇದನ್ನೂ ಓದಿ:ತುರ್ತು ಪರಿಸ್ಥಿತಿಗಿಂತ ದೊಡ್ಡ ವಿಚಾರ ಮಾಡುತ್ತಿದ್ದಾರೆ: ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

Advertisement

ದೊಡ್ಡ ದೊಡ್ಡವರು ಭ್ರಷ್ಟಾಚಾರ ಮಾಡಿದ್ದರೆ ಅವರ ಸಮರ್ಥನೆಗೆ ನಿಲ್ಲಬೇಕೆಂದು ನಿಮ್ಮ ಮಾಸ್ಟ್ರು ನಿಮಗೆ ಹೇಳಿದ್ದಾರಾ? ಭ್ರಷ್ಟರ ರಕ್ಷಣೆಗೆ ನಿಲ್ಲುವುದೇ ನನ್ನ ಪರಮ ಧ್ಯೇಯ ಎಂದು ಸಿದ್ದರಾಮಯ್ಯನವರು ಎಣಿಸಿಕೊಂಡಿದ್ದಾರೆ ಎಂದು ಸಿ.ಟಿ.ರವಿ ಟೀಕೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next