Advertisement

ಮಾಳ ಬಸ್‌ ಧರೆಗೆ ಢಿಕ್ಕಿ: 9 ಸಾವು

09:51 AM Feb 16, 2020 | mahesh |

ಕಾರ್ಕಳ: ಕಾರ್ಕಳ ತಾ| ಮಾಳ ಗ್ರಾಮದ ಮುಳ್ಳೂರು ಘಾಟ್‌ ಬಳಿ ಬಸ್ಸೊಂದು ಧರೆಗೆ ಢಿಕ್ಕಿ ಹೊಡದ ಪರಿಣಾಮ 9 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ 5:35ರ ವೇಳೆ ನಡೆದಿದೆ.

Advertisement

ಮೈಸೂರಿನ ಸೆಂಚುರಿ ವೈಟಲ್‌ ರೆಕಾರ್ಡ್ಸ್‌ ಕಂಪನಿಯ ಸುಮಾರು 35 ಮಂದಿ ಸಿಬ್ಬಂದಿ ಮೈಸೂರಿನಿಂದ ಹೊರನಾಡು, ಕುದುರೆಮುಖವಾಗಿ ಮಂಗಳೂರು ಸಾಗುತ್ತಿದ್ದ ಬಸ್ ಮಾಳ ಎಸ್‌ಕೆ ಬಾರ್ಡರ್‌ ಸಮೀಪದ ಮುಳ್ಳೂರು ಘಾಟ್‌ ಬಳಿ ಬಂಡೆ ಕಲ್ಲಿನಿಂದ ಆವೃತ್ತವಾಗಿದ್ದ ಧರೆಗೆ ಬಸ್‌(ಕೆಎ 01, ಎಸಿ 4960) ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ 3 ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುತ್ತಾರೆ.

ರಾಧರವಿ (22), ಯೋಗೀಂದ್ರ (21), ಪ್ರೀತಂ ಗೌಡ (21) ಬಸವರಾಜ್‌ (22), ಅನಘ್ನಾ (20), ಶರಿಲ್‌ (21), ರಂಜಿತಾ ಪಿ. (21) ಚಾಲಕ, ಅಡುಗೆ ಸಿಬ್ಬಂದಿ ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುತ್ತಾರೆ.

Advertisement

ಅನೇಕರು ಗಾಯಗೊಂಡಿದ್ದು, 12 ಮಂದಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ, 13 ಮಂದಿ ಕಾರ್ಕಳ ಸಿಟಿ ಆಸ್ಪತ್ರೆ ಹಾಗೂ 5 ಮಂದಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next