Advertisement

ಸುಲಿಗೆ ಹಣ ಪಾವತಿಸದ ಉದ್ಯಮಿಗಳಿಬ್ಬರನ್ನು ಗುಂಡಿಕ್ಕಿ ಕೊಲೆ

04:37 PM Jul 26, 2018 | Team Udayavani |

ಪ್ರತಾಪಗಢ, ಉತ್ತರ ಪ್ರದೇಶ : ಸುಲಿಗೆ ಹಣ ಪಾವತಿಸದಿರುವ ಕಾರಣಕ್ಕೆ ಇಲ್ಲಿನ ಕೊಹಂದೋರ್‌ ಪ್ರದೇಶದಲ್ಲಿ ಇಬ್ಬರು ಉದ್ಯಮಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಹಂತಕರು ಶ್ಯಾಂ ಸುಂದರ್‌ ಜೈಸ್ವಾಲ್‌ (55) ಮತ್ತು ಶ್ಯಾಮ್‌ ಮೂರತ್‌ ಜೈಸ್ವಾಲ್‌ (48) ಎಂಬ ಉದ್ಯಮಿ ಸಹೋದರರಿಬ್ಬರನ್ನು ಗುಂಡಿಕ್ಕಿ ಕೊಂದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಹೋದರ ಉದ್ಯಮಿಗಳು ಕಟ್ಟಡ ಉಪಕರಣಗಳ ಉದ್ಯಮ ನಡೆಸುತ್ತಿದ್ದರು. ಇವರಿಗೆ ಕಳೆದ ಕೆಲವು ದಿನಗಳಿಂದ ಸುಲಿಗೆ ಹಣದ ಫೋನ್‌ ಕರೆಗಳು ಬರುತ್ತಿದ್ದವು ಎಂದು ಅವರ ಕುಟುಂಬದವರು ಹೇಳಿದ್ದಾರೆ. 

ಈ ಘಟನೆಗಾಗಿ ಕೊಹಂದೋರ್‌ ಪೊಲೀಸ್‌ ಠಾಣೆಯ ಎಸ್‌ಎಚ್‌ಓ ನಾಗೇಂದ್ರ ಸಿಂಗ್‌ ನಗರ್‌ ಅವರನ್ನು ಅಮಾನತು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next