Advertisement

ಉದ್ಯಮಿ ಯಶ್‌ಪಾಲ್‌ ಮೊಗವೀರ ಬ್ಯಾಂಕಿಗೆ ಭೇಟಿ

12:05 PM May 24, 2019 | Vishnu Das |

ಮುಂಬಯಿ: ಕರಾವಳಿಯ ಪ್ರಸಿದ್ಧ ಸಹಕಾರಿ ಸಂಸ್ಥೆ ಗಳಲ್ಲಿ ಒಂದಾಗಿರುವ ಮಹಾಲಕ್ಷ್ಮೀ ಕೋ–ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಇದರ ಅಧ್ಯಕ್ಷ ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟಗಾರರ ಫೆಡರೇಶನ್‌ ಇದರ ಅಧ್ಯಕ್ಷ, ಉದ್ಯಮಿ, ರಾಜಕೀಯ ಮುಖಂಡ ಯಶ್‌ಪಾಲ್‌ ಸುವರ್ಣ ಅವರು ಮುಂಬಯಿ ತುಳು- ಕನ್ನಡಿಗರ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಮೊಗವೀರ ಕೋ- ಆಪರೇಟಿವ್‌ ಬ್ಯಾಂಕಿಗೆ ಭೇಟಿ ನೀಡಿದರು.

Advertisement

ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿರುವ ಮೊಗವೀರ ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್‌ ಅವರು ಯಶ್‌ಪಾಲ್‌ ಸುವರ್ಣ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯಶ್‌ಪಾಲ್‌ ಸುವರ್ಣ ಅವರು, ನಮ್ಮ ಹೆಮ್ಮೆಯ ಬ್ಯಾಂಕಿಗೆ ಭೇಟಿ ನೀಡಲು ತುಂಬಾ ಸಂತೋಷವಾಗುತ್ತಿದೆ. ಅದರ ಪ್ರಗತಿಯ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಬ್ಯಾಂಕ್‌ ಇನ್ನಷ್ಟು ಶಾಖೆಗಳನ್ನು ತೆರೆದು ಯಶಸ್ಸಿನತ್ತ ಸಾಗಲಿ ಎಂದು ನುಡಿದು, ತಮ್ಮ ಬ್ಯಾಂಕಿಂಗ್‌ ಅನುಭವವನ್ನು ಹಂಚಿ ಶುಭಹಾರೈಸಿದರು.

ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್‌ ಅವರು ಮಾತನಾಡಿ, ಬ್ಯಾಂಕಿಂಗ್‌ ವಲಯದಲ್ಲಿ ಈ ರೀತಿಯ ಸ್ನೇàಹ ಬಾಂಧವ್ಯವು ಪ್ರಗತಿಗೆ ಪೂರಕವಾಗುತ್ತದೆ. ಯಶ್‌ಪಾಲ್‌ ಸುವರ್ಣ ಅವರು ನಮ್ಮ ಕಚೇರಿಗೆ ಭೇಟಿ ನೀಡಿರುವುದು ಸಂತೋಷದ ವಿಷಯವಾಗಿದೆ. ಅವರ ಭವಿಷ್ಯದ ಯೋಜನೆ- ಯೋಚನೆಗಳು ಶೀಘ್ರದಲ್ಲಿ ಕೈಗೂಡಲಿ ಎಂದರು.

ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್‌, ಉಪ ಕಾರ್ಯಾಧ್ಯಕ್ಷ ಧರ್ಮಪಾಲ್‌ ಪಿ., ನಿರ್ದೇಶಕರಾದ ಪುರುಷೋತ್ತಮ ಶ್ರೀಯಾನ್‌, ಮುಖೇಶ್‌ ಬಂಗೇರ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ. ಡಿ. ಶಿರಾಲಿ ಅವರು ಯಶ್‌ಪಾಲ್‌ ಸುವರ್ಣ ಅವರಿಗೆ ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿ ಅಭಿನಂದಿಸಿ ಶುಭಹಾರೈಸಿ ದರು.

ಅಂಧೇರಿ ಶಾಖೆಗೆಯಶ್‌ಪಾಲ್‌ ಸುವರ್ಣ ಅವರು ಸಮೀಪದ ಅಂಧೇರಿ ಪಶ್ಚಿಮ ಮೊಗವೀರ ಬ್ಯಾಂಕಿನ ಶಾಖೆಗೆ ಭೇಟಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next