Advertisement

Kaup: ಕಾಪುವಿನ ಹಿರಿಯ ಉದ್ಯಮಿ ಕಾಪು ಕಮಲಾಕ್ಷ ನಾಯಕ್ ನಿಧನ

08:57 AM Aug 13, 2024 | Team Udayavani |

ಕಾಪು: ಕಾಪು ಪೇಟೆಯ ಹಿರಿಯ ಉದ್ಯಮಿ ಕಾಪು ಕಮಲಾಕ್ಷ ನಾಯಕ್ (71) ಅವರು ಮಂಗಳವಾ (ಆ. 13 ರಂದು) ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಪುತ್ರ ಯುವ ಉದ್ಯಮಿ ಅನುಪೂರ್ವಿ ಸಮೂಹ ಸಂಸ್ಥೆಗಳ ಸ್ಥಾಪಕ ಹರೀಶ್ ನಾಯಕ್ ಮತ್ತು ಪುತ್ರಿ ಲಕ್ಷ್ಮೀ ಮೋಹನ್ ದಾಸ್ ಶೆಣೈ ಅವರನ್ನು ಅಗಲಿದ್ದಾರೆ.

ಕಾಪು ಲಕ್ಷ್ಮೀ ಜನರಲ್ ಸ್ಟೋರ್ಸ್ ನ ಮಾಲಕರಾಗಿದ್ದ ಅವರು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡು ಬರುತ್ತಿದ್ದರು.

1975ರಲ್ಲಿ ಕಾಪುವಿನಲ್ಲಿ ಸಂಘ ಪರಿವಾರದ ಸದಸ್ಯರಾಗಿ, ಕಾಪು ಮಂಡಲ ಬಿಜೆಪಿಯ ಮಾಜಿ ಮಂಡಲ ಅಧಕ್ಷರಾಗಿ ಹಲವು ವರ್ಷಗಳ ಕಾಲ ಬಿಜೆಪಿ ಕಚೇರಿಯ ಸಂಪೂರ್ಣ ಜವಾಬ್ದಾರಿ ವಹಿಸಿ ನಿರ್ವಹಿಸಿದ್ದರು. ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹಳೆ ಹಳೆಮಾರಿಯಮ್ಮ ದೇವಸ್ಥಾನದ ಮಾಜಿ ಮೊಕ್ತೇಸರರಾಗಿದ್ದು, ಕಾಪು ನಾಯಕ್ ಕುಟಂಬದ ಶ್ರೀ ಮೂಲನಾಗ ದೇವರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಗಿ ಶ್ರೀ ಮೂಲ ನಾಗ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯದಲ್ಲೂ ಮುಂಚೂಣಿಯ ಪಾತ್ರ ನಿರ್ವಹಿಸಿದ್ದರು.

ಕಾಪು‌ ಕಮಲಾಕ್ಷ ಶೆಣೈ ಅವರ‌‌ ನಿಧನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ‌ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು‌ ಶ್ರೀ ವೆಂಕಟರಮಣ ಮತ್ತು ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಶೆಣೈ, ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕರ್ನಾಟಕ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ.‌ ಶೆಟ್ಟಿ, ಕಾಪು‌ ನಾಯಕ್ ಕುಟುಂಬಸ್ಥರ ನಾಗ ಮೂಲಸ್ಥಾನದ ಆಡಳಿತ ಮಂಡಳಿ ಹಾಗೂ ಸಮಾಜದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement

ಬೆಳಿಗ್ಗೆ ಅಂತ್ಯಕ್ರಿಯೆ : ಮೃತರ ಅಂತಿಮ ಕ್ರಿಯೆಯು ಆ.13 ರಂದು ಬೆಳಿಗ್ಗೆ 10.30ಕ್ಕೆ ಕಾಪು ಪೇಟೆಯಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next