Advertisement

ಬಾಲಕಿ ಕಾಲಿನ ಮೇಲೆ ಹರಿದ ಬಸ್‌

04:21 PM Jun 17, 2019 | Team Udayavani |

ತುಮಕೂರು: ಬೆಳಗುಂಬದಲ್ಲಿ ಖಾಸಗಿ ಬಸ್‌ ಚಾಲಕನ ಅಜಾಗರೂಕತೆ ಚಾಲನೆಯಿಂದ ಬಾಲಕಿ ಎರಡು ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಇದರಿಂದ ಆಕ್ರೋಶ ಗೊಂಡ ಸ್ಥಳೀಯರು ಬಸ್‌ನ ಗಾಜು ಪುಡಿ ಮಾಡಿದ್ದಾರೆ.

Advertisement

5 ವರ್ಷದ ಬಾಲಕಿ ನೇತ್ರಾವತಿ ರಸ್ತೆ ದಾಟುವಾಗ ಊರ್ಡಿಗೆರೆ ಕಡೆಯಿಂದ ತುಮಕೂರಿನ ಕಡೆಗೆ ವೇಗವಾಗಿ ಬಂದ ಶ್ರೀ ವಿನಾಯಕ ಹೆಸರಿನ ಬಸ್‌ ಆಕೆಯ ಎರಡೂ ಕಾಲಿನ ಮೇಲೆ ಬಸ್‌ ಹರಿದಿದೆ. ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಗುವಿನ ಕಾಲುಗಳಿಗೆ ತೀವ್ರ ಸ್ವರೂಪದ ಗಾಯ ಗಳಾಗಿದ್ದು, ಬಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.ಬಾಲಕಿಯ ತಂದೆ ಅರುಣ್‌ ಗಾರೆ ಕೆಲಸ ಮಾಡುತ್ತಿದ್ದು, ತಾಯಿ ಭಾಗ್ಯಮ್ಮ ಮನೆ ಕೆಲಸ ನಿರ್ವಹಿಸುತ್ತಾರೆ.

ಬಸ್ಸಿಗೆ ಕಲ್ಲು: ಬಾಲಕಿಯ ಎರಡು ಕಾಲುಗಳ ಮೇಲೆ ವಿನಾಯಕ ಬಸ್‌ ಹರಿದಿರುವುದರಿಂದ ಈ ದುರಂತಕ್ಕೆ ಬಸ್‌ ಚಾಲಕನ ಅಜಾಗರೂಕತೆ ಹಾಗೂ ಅತೀ ವೇಗವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಉದ್ರಿಕ್ತರ ಗುಂಪು ಬಸ್‌ಗೆ ಕಲ್ಲು ಹೊಡೆದಿದ್ದು, ಗಾಜುಗಳು ಪುಡಿಪುಡಿಯಾಗಿದೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಉದ್ರಿಕ್ತ ಗುಂಪನ್ನು ಚದುರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next