Advertisement

ಕಾಲೇಜ್‌ ವರೆಗೆ ಬಸ್ ಸೌಲಭ್ಯ

09:55 AM Sep 24, 2019 | Team Udayavani |

ಜಗಳೂರು: ಪಟ್ಟಣದಿಂದ ಕಾಲೇಜು ತುಂಬಾ ದೂರ ಇರುವುದರಿಂದ ಇಂದಿನಿಂದ ಬಸ್‌ ನಿಲ್ದಾಣದಿಂದ ಕಾಲೇಜಿನವರೆಗೂ ದಿನಕ್ಕೆರಡು ಬಾರಿ ಸರಕಾರಿ ಸಿಟಿ ಬಸ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು.

Advertisement

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಮಾರು ಒಂದೂವರೆ ಕಿಮೀ ದೂರವಿದ್ದು, ಸಕಾಲಕ್ಕೆ ಕಾಲೇಜ್‌ ತಲುಪಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರುವುದನ್ನು ಅರಿತು ಬಸ್‌ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಬಸ್‌ ಎರಡು ಬಾರಿ ಸಂಚರಿಸಲಿದೆ ಎಂದರು.

ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿದರು. ಜಿಪಂ ಸದಸ್ಯ ಎಸ್‌.ಕೆ ಮಂಜುನಾಥ್‌, ಮಾಜಿ ಸದಸ್ಯ ಸೊಕ್ಕೆ ನಾಗರಾಜ್‌, ಬಸವರಾಜ ಬಾಬು, ಗಾಯಿತ್ರಮ್ಮ ಸಿದ್ದೇಶ್ವರ್‌, ಇಂದಿರಾ ರಾಮಚಂದ್ರ, ಜಯಲಕ್ಷ್ಮೀ ಮಹೇಶ್‌, ಮಂಜುಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next