Advertisement

ಟ್ರಕ್ ಗೆ ಢಿಕ್ಕಿ ಹೊಡೆದ ಬಸ್: ಏಳು ಮಂದಿ ಕಾರ್ಮಿಕರ ದುರ್ಮರಣ

03:58 PM Sep 05, 2020 | keerthan |

ರಾಯಪುರ (ಛತ್ತೀಸ್ ಗಢ್): ಒರಿಸ್ಸಾ ದಿಂದ ಗುಜರಾತ್ ಗೆ ಕಾರ್ಮಿಕರನ್ನು ತುಂಬಿಕೊಂಡು ಹೋಗುತ್ತಿದ್ದ ಬಸ್ಸೊಂದು ಟ್ರಕ್ ಗೆ ಢಿಕ್ಕಿ ಹೊಡೆದು ಏಳು ಮಂದಿ ಸಾವನ್ನಪ್ಪಿದ ಘಟನೆ ರಾಯಪುರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

Advertisement

ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಒರಿಸ್ಸಾದ ಗಂಜಾಮ್ ನಿಂದ ಗುಜರಾತ್ ರಾಜ್ಯದ ಸೂರತ್ ಗೆ ಈ ಕಾರ್ಮಿಕರು ತೆರಳುತ್ತಿದ್ದರು. ರಾಯಪುರದ ಚೆರಿ ಖೇಡಿ ಬಳಿ ಟ್ರಕ್ ಗೆ ಬಸ್ ಢಿಕ್ಕಿ ಹೊಡೆದು ಅನಾಹುತ ಸಂಭವಿಸಿದೆ.

ಇನ್ನಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next