Advertisement

ಬ್ರೇಕ್‌ ಫೇಲ್‌ ಆಗಿ ಅಂಗಡಿಗೆ ನುಗ್ಗಿದ ಬಸ್‌: ಯುವಕ ದುರ್ಮರಣ 

03:29 PM Jun 01, 2018 | |

ಸೋಮವಾರಪೇಟೆ : ತಾಲೂಕಿನ  ಕುಶಾಲನಗರ ಪಟ್ಟಣದಲ್ಲಿ  ಗುರುವಾರ ಮಧ್ಯಾಹ್ನ ಖಾಸಗಿ ಬಸ್ಸೊಂದು ಬ್ರೇಕ್‌ ಫೇಲ್‌ ಆಗಿ ಏಕಾಏಕಿ ಅಂಗಡಿಗೆ ನುಗ್ಗಿದ್ದು, ಪಾದಾಚಾರಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. 

Advertisement

ಐಬಿ ರಸ್ತೆಯ ಮಸೀದಿ ಬಳಿ ಘಟನೆ ನಡೆದಿದ್ದು, ಅವಘಡದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಸ್‌ ಅಡ್ಡಾದಿಡ್ಡಿ ಚಲಿಸಿದ್ದನ್ನು ಕಂಡುಉ ರಸ್ತೆಯಲ್ಲಿದ್ದ ಪಾದಾಚಾರಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. 

ಮೃತ ದುರ್ದೈವಿ  21 ವರ್ಷದ ರಾಜೇಶ್‌ ಎಂದು ತಿಳಿದು ಬಂದಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. 

ಘಟನೆಯಲ್ಲಿ ಬಸ್‌ ಚಾಲಕ ಸೇರಿದಂತೆ ಇಬ್ಬರು ಸಣ್ಣಪುಟ್ಟ ಗಾಯಗಳಿಗೊಳಗಾಗಿದ್ದಾರೆ.  
ಬಸ್ಸನ್ನು ರಿಪೇರಿಗೆಂದು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ತಿಳಿದು ಬಂದಿದೆ. 

ಕುಶಾಲನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next