Advertisement

Burhanpur; ಕರ್ನಾಟಕಕ್ಕೆ ಬರುತ್ತಿದ್ದ ಯೋಧರ ರೈಲು ಸ್ಫೋಟಿಸಲು ಸಂಚು?

11:26 PM Sep 22, 2024 | Team Udayavani |

ನವದೆಹಲಿ: ಜಮ್ಮು ಕಾಶ್ಮೀರದಿಂದ- ಕರ್ನಾಟಕಕ್ಕೆ ಸೇನಾ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ರೈಲೊಂದನ್ನು ಸ್ಫೋಟಿ­ಸಲು ದುಷ್ಕರ್ಮಿಗಳು ಯತ್ನಿ­ಸಿದ್ದು, ರೈಲ್ವೆ ಹಳಿಯ ಮೇಲೆ ಕನಿಷ್ಠ 10 ಸ್ಫೋಟಕಗಳನ್ನು ಇರಿಸಿದ್ದ ವಿಚಾರ ಬಹಿ­ರಂಗಗೊಂಡಿದೆ. ಐಸಿಸ್‌ ಉಗ್ರ ಫ‌ರ್ಹಾ ತುಲ್ಲಾ ಘೋರಿ, ಭಯೋತ್ಪಾ­ದಕರಿಗೆ ಕರೆ ನೀಡಿದ್ದ ಬೆನ್ನಲ್ಲೇ ಇಂಥ ಘಟನೆಗಳ ವರದಿ ಆತಂಕ ಹೆಚ್ಚಿಸಿದೆ.

Advertisement

ಮಧ್ಯಪ್ರದೇಶದ ಬುರ್ಹಾನ್‌ಪು ರದ ರೈಲ್ವೆ ನಿಲ್ದಾಣದ ಬಳಿ ಬುಧ ವಾರ ರೈಲು ಆಗಮಿಸುವ ವೇಳೆ ಹಳಿ ಮೇಲೆ ಸ್ಫೋಟಕಗಳನ್ನು ಇಡಲಾಗಿದೆ. ರೈಲು ಚಲಿಸಿದ ಬಳಿಕ ಸಣ್ಣ ಸ್ಫೋಟವೂ ಆಗಿದೆ. ತಕ್ಷಣವೇ ಚಾಲಕ ಬ್ರೇಕ್‌ ಹಾಕಿದ್ದಾರೆ. ತನ್ಮೂಲಕ ಕಳೆದ 4ತಿಂಗಳಲ್ಲಿ ದೇಶದಲ್ಲಿ ಒಟ್ಟು 18 ರೈಲು ಹಳಿತಪ್ಪಿ ಸುವ ಪ್ರಯತ್ನ ನಡೆದಂತಾಗಿದೆ.

ರೈಲು ಹಳಿ ಮೇಲೆ ಸಿಲಿಂಡರ್‌ ಪತ್ತೆ
ಉತ್ತರ ಪ್ರದೇಶದ ಕಾನ್ಪುರದ ಬಳಿ ಕಾಲಿಂದಿ ಎಕ್ಸ್‌ಪ್ರೆಸ್‌ ಅನ್ನು ಸ್ಫೋಟಿ ಸಲು ಹಳಿ ಮೇಲೆ ಸಿಲಿಂಡರ್‌ ಇಡ ಲಾಗಿತ್ತು. ಆ ಬೆನ್ನಲ್ಲೇ ಇದೀಗ ಕಾನ್ಪುರದ ಪೆಂಪುರ್‌ ರೈಲ್ವೆ ಹಳಿ ಮೇಲೆ ಮತ್ತೂಂದು ಖಾಲಿ ಸಿಲಿಂ ಡರ್‌ ಇಟ್ಟು ಸರಕು ಸಾಗಣೆ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next