Advertisement

ಬಂಟರ ಸಂಘ ಮುಂಬಯಿ: ಮಹಿಳಾ ಯಕ್ಷೋತ್ಸವ ಸಪ್ತಾಹ

12:16 PM Jul 26, 2017 | |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ ಕಾಟಿಪಳ್ಳ ಇವರಿಂದ ಮುಂಬಯಿ ಪ್ರವಾಸದ ಪ್ರಪ್ರಥಮ ಪ್ರದರ್ಶನ ಹಾಗೂ ಮಹಿಳಾ ಯಕ್ಷೋತ್ಸವ ಸಪ್ತಾಹದ ಉದ್ಘಾಟನ ಸಮಾರಂಭವು ಜು. 22 ರಂದು ಅಪರಾಹ್ನ 3.30ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿತು. 

Advertisement

 ಈ ಸಂದರ್ಭದಲ್ಲಿ  ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಂಯೋಜನೆಯಲ್ಲಿ ಹಾಗೂ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಪೂರ್ಣಿಮಾ ಯತೀಶ್‌ ರೈ ಅವರ ನಿರ್ದೇಶನದಲ್ಲಿ  ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next