Advertisement

ಬಂಟರ ಸಂಘ ಮುಂಬಯಿ ಆರ್ಥಿಕ ಸಹಾಯ ವಿತರಣಾ ಮೇಳದ ಪೂರ್ವಭಾವಿ ಸಭೆ

03:29 PM May 05, 2018 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಆಶ್ರಯದಲ್ಲಿ ಜೂ. 10ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾನಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಲಿರುವ ವಾರ್ಷಿಕ ಮೆಗಾ ಆರ್ಥಿಕ ಸಹಾಯ ವಿತರಣಾ ಮೇಳದ ಪೂರ್ವಭಾವಿ ತಯಾರಿ ಹಾಗೂ ಅರ್ಜಿ ಪರಿಷ್ಕರಣಾ ಸಭೆಯು ಇತ್ತೀಚೆಗೆ ಬಂಟರ ಭವನದ ಕಿರು ಸಭಾಗೃಹದಲ್ಲಿ ಜರಗಿತು.

Advertisement

ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಸಂಘದ ಪದಾಧಿಕಾರಿಗಳ ಸಹಕಾರದೊಂದಿಗೆ ಜರಗಿದ ಸಭೆಯಲ್ಲಿ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ಕೋಶಾಧಿಕಾರಿ ಸುರೇಶ್‌ ಶೆಟ್ಟಿ, ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮೋಹಿತ್‌ ಬಿ. ಶೆಟ್ಟಿ, ಪ್ರಜ್ವಲ್‌ ಬಿ. ಶೆಟ್ಟಿ, ತೇಜಸ್ವಿ ಶೆಟ್ಟಿ, ಪವಿತ್ರಾ ವಿ. ಶೆಟ್ಟಿ, ಪವನ ವಿ. ಶೆಟ್ಟಿ, ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ರವೀಂದ್ರ ವೈ. ಶೆಟ್ಟಿ, ಸುಬೋದ್‌ ಭಂಡಾರಿ, ಸುಮಿತ್‌ ಎಂ. ಶೆಟ್ಟಿ, ರೋಶನಿ ಆರ್‌. ಶೆಟ್ಟಿ, ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ  ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿ, ಶಿವಪ್ರಸಾದ್‌ ಆರ್‌. ಶೆಟ್ಟಿ, ದಿವಾಕರ ಶೆಟ್ಟಿ, ವೇಣುಗೋಪಾಲ್‌ ಶೆಟ್ಟಿ, ಕುರ್ಲಾ-ಭಾಂಡುಪ್‌ ಪ್ರಾದೇಶಿಕ ಸಮಿತಿಯ ಗಿರೀಶ್‌ ಆರ್‌. ಶೆಟ್ಟಿ,  ಪ್ರಕಾಶ್‌ ಶೆಟ್ಟಿ, ವೀಣಾ ಶೆಟ್ಟಿ, ತಾರಾನಾಥ ಶೆಟ್ಟಿ, ದಿವಾಕರ ಬಿ. ಶೆಟ್ಟಿ, ಮನೀಶ್‌ ಶೆಟ್ಟಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ 

ಸಮಿತಿಯ ಶ್ರೀಧರ್‌ ಶೆಟ್ಟಿ, ರಮೇಶ್‌ ರೈ, ಪ್ರಶಾಂತಿ ಡಿ. ಶೆಟ್ಟಿ, ನಿಧಿಶ್ರೀ ಶೆಟ್ಟಿ, ವನಿತಾ ಯೋಗೇಶ್‌ ನೋಂಡ, ವಜ್ರ ಪೂಂಜ, ರಕ್ಷಿತ್‌ ಶೆಟ್ಟಿ, ನವಿಮುಂಬಯಿ ಪ್ರಾದೇಶಿಕ ಸಮಿತಿಯ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಸ್ವೀಕೃತ್‌ ಎಸ್‌. ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿಯ ಪ್ರಕಾಶ್‌ ಟಿ. ಶೆಟ್ಟಿ, ವಿಶ್ವನಾಥ ಶೆಟ್ಟಿ, ಗೌರವ ಶೆಟ್ಟಿ ಮೊದಲಾದವರು ಭಾಗವಹಿಸಿ ಮೆಗಾ ಆರ್ಥಿಕ ಸಹಾಯಕ್ಕಾಗಿ ಬಂದ ಅರ್ಜಿಗಳ ಅಂತಿಮ ಸುತ್ತಿನ ಪರಿಷ್ಕರಣೆ ಕಾರ್ಯದಲ್ಲಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next