Advertisement

ಬಂಟರ ಸಂಘ ಮುಂಬಯಿ: ಬಂಟರ ಭವನ ಸಂಕೀರ್ಣದಲ್ಲಿ ಸ್ವಾತಂತ್ರ್ಯೋತ್ಸವ

01:46 PM Aug 17, 2021 | Team Udayavani |

ಕುರ್ಲಾ: ಬಂಟರ ಸಂಘ ಮುಂಬಯಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯು ಕುರ್ಲಾ ಪೂರ್ವದ ಬಂಟರ ಭವನದ ಸಂಕೀರ್ಣದಲ್ಲಿ ಆ. 15ರಂದು ಬೆಳಗ್ಗೆ ನಡೆಯಿತು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಧ್ವಜಾರೋಹಣಗೈದು ಶುಭ ಹಾರೈಸಿದರು.

Advertisement

ಈ ಸಂದರ್ಭದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್‌. ಕೆ.ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್‌ ಡಿ. ಶೆಟ್ಟಿ, ಜತೆ ಕೋಶಾ ಧಿ ಕಾರಿ ಮುಂಡಪ್ಪ ಎಸ್‌. ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ
ಉಮಾ ಕೃಷ್ಣ ಶೆಟ್ಟಿ, ಕೋಶಾಧಿಕಾರಿ ಸುಜಾತಾ ಗುಣಪಾಲ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್‌ ಡಿ. ಶೆಟ್ಟಿ ಮತ್ತು ಕಾರ್ಯಕಾರಿ
ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ವಿಶ್ವಾಸದಿಂದ ಕೆಲಸ ಆರಂಭಿಸಿ : ಅಫ್ಘಾನಿಸ್ತಾನದ ಸರಕಾರಿ ಅಧಿಕಾರಿಗಳಿಗೆ ತಾಲಿಬಾನ್ ಸೂಚನೆ

ಸಂಘದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಡಾ| ಸತ್ಯಪ್ರಕಾಶ್‌ ಶೆಟ್ಟಿ, ಸಿಎಐ. ಆರ್‌. ಶೆಟ್ಟಿ, ಆದರ್ಶ್‌ ಶೆಟ್ಟಿ, ಗುಣಪಾಲ್‌ ಶೆಟ್ಟಿ ಐಕಳ, ಶಾಂತಾರಾಮ ಶೆಟ್ಟಿ, ಕೃಷ್ಣ ವಿ. ಶೆಟ್ಟಿ, ಸುಂದರ್‌ ಶೆಟ್ಟಿ, ಸಿಎ ರಮೇಶ್‌ ಶೆಟ್ಟಿ, ಪಿ. ಧನಂಜಯ್‌ ಶೆಟ್ಟಿ, ಭಾಸ್ಕರ್‌ ಶೆಟ್ಟಿ ಕಾರ್ನಾಡ್‌, ಅಶೋಕ್‌ ಪಕ್ಕಳ, ಕರ್ನೂರು ಮೋಹನ್‌ ರೈ, ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು, ಸುರೇಶ್‌ ಎಲ್‌. ಶೆಟ್ಟಿ, ನಲ್ಯಗುತ್ತು ಪ್ರಕಾಶ್‌ ಶೆಟ್ಟಿ, ವಿಶ್ವನಾಥ ಶೆಟ್ಟಿ ಕಾಪು, ಪದ್ಮನಾಭ ಶೆಟ್ಟಿ, ಅಶೋಕ್‌ ಶೆಟ್ಟಿ ಪಾಂಗಾಳ, ಸಿಎ ವಿಶ್ವನಾಥ್‌ ಶೆಟ್ಟಿ, ಗಿರೀಶ್‌ ಶೆಟ್ಟಿ, ನ್ಯಾಯವಾದಿ ಆರ್‌. ಜಿ. ಶೆಟ್ಟಿ, ನೀಲೇಶ್‌ ಶೆಟ್ಟಿ, ಪ್ರಸನ್ನ ಶೆಟ್ಟಿ, ಸಂಗೀತಾ ಸಿ. ಶೆಟ್ಟಿ, ವಜ್ರಾ ಪೂಂಜಾ, ವನಿತಾ ನೋಂಡ, ಕೇಶವ ಶೆಟ್ಟಿ, ಅಣ್ಣಾಲೀಲಾ ಕಾಲೇಜ್‌ನ ಡಾ| ಪ್ರೊ| ಕೃಷ್ಣ ಶೆಟ್ಟಿ, ಡಾ| ಪ್ರಶಾಂತ್‌ ಶಿಂಧೆ, ಪ್ರಕಾಶ್‌ ಮೋರೆ, ಸಂಯೋಗಿತಾ ಮೊರಾರ್ಜಿ, ಶೈಲಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next