Advertisement

ಬಂಟರ ಸಂಘದಿಂದ ಅನಿಲ್‌ ಶೆಟ್ಟಿಗೆ ನೆರವಿನ ಭರವಸೆ

03:40 PM Nov 09, 2017 | Team Udayavani |

ಮುಂಬಯಿ: ರಾಜ್ಯ ಮಟ್ಟದ ಮಾಜಿ ದೇಹದಾಡ್ಯìಪಟು, ವೃತ್ತಿಪರ ವ್ಯಾಯಾಮ ತರಬೇತುದಾರ, ರಾಷ್ಟ್ರೀಯ ಕ್ರೀಡಾ ಪುರಸ್ಕೃತ 67 ಹರೆಯದ ಅನಿಲ್‌ ಶೆಟ್ಟಿ ಅವರು ತನ್ನ ಕ್ಷಯರೋಗದ ಚಿಕಿತ್ಸೆಗಾಗಿ ವಸಾಯಿಯಲ್ಲಿ ಸಾರ್ವಜನಿಕರಿಂದ ಭಿಕ್ಷಾರೂಪದಲ್ಲಿ ಹಣ ಸಂಗ್ರಹಿಸುತ್ತಿರುವ ವರದಿಯೊಂದು ಮಿಡ್ಡೇ ಆಂಗ್ಲ ದಿನ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಸುದ್ದಿ ತಿಳಿದ ಬಂಟರ ಸಂಘ ಮುಂಬಯಿ ಇದರ ನೂತನ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ತತ್‌ಕ್ಷಣ ಸ್ಪಂದಿಸಿದ್ದು, ವೈಯಕ್ತಿಕ ಹಾಗೂ ಸದಸ್ಯರಿಂದ ನೆರವು ದೊರಕಿಸಿಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Advertisement

ಬಂಟರ ಸಂಘದ ಜೊತೆ ಕೋಶಾಧಿಕಾರಿ, ಉದ್ಯಮಿ ಮಹೇಶ್‌ ಎಸ್‌. ಶೆಟ್ಟಿ ಅವರು ಸಂಪೂರ್ಣ ನೆರವಿಗಾಗಿ ಸ್ಪಂದಿಸಿದ್ದು, ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್‌. ಹೆಗ್ಡೆ ಅವರು  ಅನಿಲ್‌ ಶೆಟ್ಟಿ ಅವರ ಶೋಚನೀಯ ಪರಿಸ್ಥಿತಿಯನ್ನು ಕಂಡು ಮರುಕ ವ್ಯಕ್ತಪಡಿಸಿದ್ದಾರಲ್ಲದೆ, ವೈಯಯಕ್ತಿಕ ಸಹಾಯ ನೀಡಲು ಮುಂದಾಗಿದ್ದಾರೆ. ಸಂಘದ ಸದಸ್ಯರೆಲ್ಲರೂ ಮಾನವೀಯತೆಯ ದೃಷ್ಟಿಯಿಂದ ಅನಿಲ್‌ ಶೆಟ್ಟಿ ಅವರಿಗೆ ಎಲ್ಲಾ ರೀತಿಯ ಸಹಾಯಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next