Advertisement

ಬಂಟ ವಧು-ವರರ ಚಾವಡಿ ವಧು-ವರರ ಸಮಾವೇಶ ಪೂರ್ವಭಾವಿ ಸಭೆ

03:18 PM Jul 11, 2018 | |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮ್ಯಾರೇಜ್‌ ಸೆಲ್‌ನ ಕಾರ್ಯಾಧ್ಯಕ್ಷ ಸುರೇಶ್‌ ಎನ್‌. ಶೆಟ್ಟಿ  ನೇತೃತ್ವದಲ್ಲಿ  ಬಂಟ ವಧು-ವರ ಚಾವಡಿ  ವತಿಯಿಂದ ವಿಶೇಷ ಸಭೆಯು  ಮುಲುಂಡ್‌ ಪೂರ್ವದ ಹೊಟೇಲ್‌ ಬಾನ್ಸೂರಿ ಸಭಾಂಗಣದಲ್ಲಿ ನಡೆಯಿತು.

Advertisement

ಬಂಟ ಸಮಾಜದಲ್ಲಿ  ವಧು-ವರರ ಹುಡುಕಾಟದಲ್ಲಿರುವವರಿಗೆ ಹಲವಾರು ಸಮಸ್ಯೆಗಳ ಎದುರಾಗುತ್ತಿದ್ದು, ಇದನ್ನು ಶಮನಗೊಳಿಸುವ ಮತ್ತು ಸಮಾಜ ಬಾಂಧವರಿಗೆ ಸಹಕರಿಸುವ ಉದ್ದೇಶದಿಂದ ಬಂಟ ವಧು-ವರ ಸಮಾವೇಶವೊಂದನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಮಾರ್ಗದರ್ಶನದಲ್ಲಿ ಈ ಸಮಾವೇಶನ್ನು ನಡೆಸುವುದಾಗಿ ಸದಸ್ಯ ಬಾಂಧವರು ಸಭೆಯಲ್ಲಿ ನಿರ್ಧರಿಸಿದರು.

ಆ. 15 ರಂದು ಪೂರ್ವಾಹ್ನ 10 ರಿಂದ ಅಪರಾಹ್ನ 3 ರವರೆಗೆ ವಧು-ವರರ ಚಾವಡಿಯ ವತಿಯಿಂದ ಬಂಟ ವಧು-ವರರ ಸಮಾವೇಶವು ಕುರ್ಲಾ ಪೂರ್ವದ ಬಂಟರ ಭವನದಲ್ಲಿರುವ ಮುಕ್ತಾನಂದ ಸಭಾಗೃಹದಲ್ಲಿ ಆಯೋಜಿಸಲಾಗುವುದೆಂದು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಬಾನ್ಸುರಿ ಹೊಟೇಲ್‌ನ ಮಾಲಕ ರತ್ನಾಕರ ಶೆಟ್ಟಿ ಅವರು  ಉಪಸ್ಥಿತರಿದ್ದರು.

ಮಂಜುನಾಥ ಶೆಟ್ಟಿ, ಸನ್‌ಜಿತ್‌ ಶೆಟ್ಟಿ, ಮನೋಹರ ಶೆಟ್ಟಿ, ಮಮತಾ ಶೆಟ್ಟಿ ಹಾಗೂ ಶಶಿಕಾಂತಿ ಶೆಟ್ಟಿ ಅವರು ಸಲಹೆ-ಸೂಚನೆಗಳನ್ನು ನೀಡಿದರು. ವಧು-ವರರ ಚಾವಡಿಯಲ್ಲಿ ಭಾಗವಹಿಸಲಿಚ್ಛಿಸುವ ಪೋಷಕರು ಹಾಗೂ ವಧುವರರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳತಕ್ಕದ್ದು. ಮಾಹಿತಿಗಾಗಿ ಮಮತಾ ಶೆಟ್ಟಿ (9821225597), ಶಶಿಕಾಂತಿ ಶೆಟ್ಟಿ (9768661090) ಇವರನ್ನು ಸಂಪರ್ಕಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next