Advertisement

ಪೆಟ್ರೋಲ್‌ ಬದಲು ನೀರು ತುಂಬಿದ ಬಂಕ್‌ಗೆ ಬೀಗ ಜಡಿದರು!

12:08 PM Aug 23, 2017 | Team Udayavani |

ಪುಣೆ: ನಗರದ  ಪೆಟ್ರೋಲ್‌  ಪಂಪ್‌ನಲ್ಲಿ ಚಿಪ್‌ ಹಾಕಿ ಪೆಟ್ರೋಲ್‌ ಕಳ್ಳತನ ಮಾಡುವ ಪ್ರಕರಣಗಳು ಅಧಿಕ ಗೊಳ್ಳುತ್ತಿರುವ ಸಂದರ್ಭದಲ್ಲೇ ಪ್ರಸ್ತುತ  ಪೆಟ್ರೋಲ್‌ ಬದಲಿಗೆ ನೀರನ್ನು ತುಂಬುತ್ತಿರುವ  ಪ್ರಕರಣ ಬೆಳಕಿಗೆ ಬರುತ್ತಿದೆ. 

Advertisement

ಪುಣೆಯ – ನಗರ ಹೈವೆಯ ನಡುವೆ  ಶಿರೂರ  ಪೆಟ್ರೋಲ್‌ ಪಂಪ್‌ನಲ್ಲಿ ಈ ಘಟನೆ ನಡೆದಿದೆ.  ಯುವಕನೋರ್ವ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್‌ ತುಂಬಿಸಿಕೊಂಡು ನಗರದ ಕೋರ್ಟ್‌ಗೆ ಹಿಂದಿರುಗಿದಾಗ ಅವನ ವಾಹನ ರಸ್ತೆಯ ಮಧ್ಯ ದಲ್ಲಿಯೇ ನಿಂತಿದೆ. ಆ ಸಂದರ್ಭದಲ್ಲಿ ವಾಹನದ ಪೆಟ್ರೋಲ್‌ ಟಾಂಕಿಯನ್ನು ಪರೀಕ್ಷಿಸಿದಾಗ ನೀರು ತುಂಬಿದ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವಕ  ಶಿರೂರ  ತಹಶೀಲ್‌ದಾರರಿಗೆ ದೂರು ನೀಡಿದ್ದು ಅವರು ತತ್‌ಕ್ಷಣ ಪೆಟ್ರೋಲ್‌  ಪಂಪ್‌ಗೆ  ಬೀಗ ಜಡಿದಿದ್ದಾರೆ. 

ಹಿಂದೆ ಅನೇಕರು ಈ ಪೆಟ್ರೊಲ್‌ ಪಂಪ್‌ನ ಬಗ್ಗೆ ದೂರು ನೀಡಿದ್ದು, ಅದಕ್ಕಾಗಿ ಕ್ರಮ ಕ್ಯೆಗೊಳ್ಳಲಾಗಿದೆ ಎಂದು ಶಿರೂರ ತಹಶೀಲ್ದಾರ  ರಂಜಿತ್‌ ಭೋಸ್ಲೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next