Advertisement

ಕೆಜಿಎಫ್ ಗರುಡನಿಗೆ “ಬಂಪರ್‌’ಆಫ‌ರ್‌

09:28 AM Mar 11, 2020 | Lakshmi GovindaRaj |

“ಕೆಜಿಎಫ್’ ಚಿತ್ರದಲ್ಲಿ ಗರುಡ ಪಾತ್ರದ ಮೂಲಕ ಬೆಳಕಿಗೆ ಬಂದವರು ರಾಮಚಂದ್ರ ರಾಜು. ಆ ಚಿತ್ರ ಹಿಟ್‌ ಆಗುತ್ತಿದ್ದಂತೆ ರಾಮಚಂದ್ರ ರಾಜು ಹೆಸರು ಮರೆತು ಹೋಗಿ ಸಿನಿಪ್ರೇಮಿಗಳಲ್ಲಿ ಗರುಡ ಎಂದೇ ಕರೆಯಲ್ಪಡುತ್ತಿದ್ದಾರೆ. ಈಗ ಈ ಗರುಡನಿಗೆ ಬಂಪರ್‌ ಆಫ‌ರ್‌ ಸಿಕ್ಕಿದೆ. ಈ ಮೂಲಕ ಮತ್ತೂಮ್ಮೆ ತೆರೆಮೇಲೆ ಮಿಂಚಲಿದ್ದಾರೆ.

Advertisement

ಹೌದು, ಗರುಡ ಅವರು ಈಗ “ಬಂಪರ್‌’ ತಂಡ ಸೇರಿಕೊಂಡಿದ್ದಾರೆ. ಹರಿ ಸಂತೋಷ್‌ ನಿರ್ದೇಶನದಲ್ಲಿ ಮೂಡಿಬರಲಿರುವ “ಬಂಪರ್‌’ ಚಿತ್ರದಲ್ಲಿ ವಿಲನ್‌ ಆಗಿ ಗರುಡ ನಟಿಸಲಿದ್ದಾರೆ. ಖಡಕ್‌ ವಿಲನ್‌ ಆಗಿ ಸಿನಿಮಾದುದ್ದಕ್ಕೂ ಸಾಗಿಬರಲಿದ್ದಾರೆ. ಈ ಮೂಲಕ “ಬಂಪರ್‌’ ಒಂದು ಹೈವೋಲ್ಟೆಜ್‌ ಆ್ಯಕ್ಷನ್‌ ಸಿನಿಮಾವಾಗಿ ಮೂಡಿಬರುವುದು ಖಚಿತ.

ಧನ್ವೀರ್‌ ಈ ಚಿತ್ರದ ನಾಯಕ. ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಲಾಂಚ್‌ ಆದ ಧನ್ವೀರ್‌ ನಾಯಕರಾಗಿರುವ ನಟಿಸುತ್ತಿರುವ ಎರಡನೇ ಚಿತ್ರವಿದು. ಚಿತ್ರವನ್ನು ಸುಪ್ರೀತ್‌ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಭರಾಟೆ’ ಚಿತ್ರ ನಿರ್ಮಿಸಿರುವ ಸುಪ್ರೀತ್‌ ಈಗ “ಬಂಪರ್‌’ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆಯೇ ಸುಪ್ರೀತ್‌ ನಿರ್ಮಾಣದಲ್ಲಿ ಗಣೇಶ್‌ ನಾಯಕರಾಗಿರುವ “ಸಖತ್‌’ ಚಿತ್ರವೂ ಚಿತ್ರೀಕರಣದಲ್ಲಿದೆ. “ಬಂಪರ್‌’ ಚಿತ್ರಕ್ಕೆ ಪ್ರಶಾಂತ್‌ ರಾಜಪ್ಪ ಸಂಭಾಷಣೆ ಇದ್ದು, ಶಿವಸೇನಾ ಅವರ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಕೆ.ಎಂ. ಪ್ರಕಾಶ್‌ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next